ಶನಿವಾರ, ಫೆಬ್ರವರಿ 18, 2012

ಭಾನುವಾರ, ನವೆಂಬರ್ 20, 2011



ಭಾನುವಾರ, ಅಕ್ಟೋಬರ್ 16, 2011

ಪ್ರಜಾವಾಣಿ ದೀಪಾವಳಿ ವಿಶೇಷಾಂಕ ಕವನ ಸ್ಪಧರ್ೆ -2011



ಸಹೃದಯ ಕವಿ ಬಸವರಾಜ ಹೃತ್ಸಾಕ್ಷಿ ಸಿರವಾರ ಅವರ
'ಒಬ್ಬ ಅವ್ವ ಇರಲಿ, ಈ ಬಿಸಿಲ ಕೂಸುಗಳಿಗೆ' ಕವನ ಈ ಬಾರಿಯ ಪ್ರತಿಷ್ಠಿತ ಪ್ರಜಾವಾಣಿ ದೀಪಾವಳಿ ವಿಶೇಷಾಂಕ ಕವನ ಸ್ಪಧರ್ೆಯಲ್ಲಿ (2011) ಪ್ರಥಮ ಬಹುಮಾನ ಪಡೆದಿದೆ. ರಾಯಚೂರು ಜಿಲ್ಲೆಯ ಮಾನವಿ ತಾಲ್ಲೂಕಿನ ಸಿರವಾರದಲ್ಲಿ ಬಸವರಾಜ ಹೃತ್ಸಾಕ್ಷಿ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಇನ್ನೂ ಎರಡನೇ ಬಹುಮಾನ ಆರೀಫ್ ರಾಜಾ ಅವರ " ಬುಖರ್ಾ ಹೌಸಿನ ಮುಂದೆ' ಕವನಕ್ಕೆ ದೊರೆತಿದೆ. ಈ ಬಾರಿ ಪ್ರಥಮ ಮತ್ತು ದ್ವಿತೀಯ ಬಹುಮಾನ ರಾಯಚೂರು ಜಿಲ್ಲೆಗೆ ದಕ್ಕಿರುವುದು ವಿಶೇಷ. ಈ ಹಿಂದೆಯೇ ಆರೀಫ್ ರಾಜಾ ಅವರ ಕವನ "ಜಂಗಮ ಪಕೀರನ ಜೋಳಿಗೆ'ಗೆ ಪ್ರಥಮ ಸ್ಥಾನ ದೊರೆತಿದ್ದನ್ನು ನಾವು ಸ್ಮರಿಸಬಹುದು.
ಕಾವ್ಯ ಕ್ಷೇತ್ರದಲ್ಲಿ ಹೊಸ ಪ್ರಯೋಗದೊಂದಿಗೆ ಜಿಲ್ಲೆಯ ಕೀತರ್ಿಯನ್ನು ಹೆಚ್ಚಿಸಿರುವ ಬಸವರಾಜ ಹೃತ್ಸಾಕ್ಷಿ ಸಿರವಾರ ಹಾಗೂ ಆರೀಫ್ ರಾಜಾ ಅವರಿಗೆ
ಹೃದಯಪೂರ್ವಕ ಅಭಿನಂದನೆಗಳು.
- ಪಿ.ಲಂಕೇಶ್ ಬಳಗ, ಸಿಂಧನೂರು (9880757380)

ಮಂಗಳವಾರ, ಸೆಪ್ಟೆಂಬರ್ 20, 2011

ಬುಧವಾರ, ಜನವರಿ 12, 2011






ಕವನ : ತಂಗಿ ನೀಲು
ತಂಗಿ ನೀಲು
ನಿನ್ನ ಮರಣದ ವಾತರ್ೆ
ಹಸಿದ ಹೊಟ್ಟೆಯ ಹೊತ್ತು ಸತುವಿಲ್ಲದ ಕಾಲುಗಳಲ್ಲಿ ನಡೆಯುತ್ತಿದ್ದೆ
ಮನುಷ್ಯರೆಲ್ಲರೂ ಮಂದಿರ,ಮಸೀದಿಗೆ ಎಡೆ ಹಿಡಿದು ಹೊರಟಿದ್ದರು
ಕೆಂಡದಾ ಮ್ಯಾಲೆ ಚಿಕ್ಕೆಗಳ ಎಣಿಸುತ ಮಲಗಿದ್ದವಳಿಗೆ
ಉರಗದ ನಾಲಿಗೆ ಬಡಿಯಿತೇ
ಬೂಜುಗಟ್ಟಿದ ಚರ್ಮ ಕಿತ್ತುಕೊಳ್ಳುತ್ತಲೇ
ಉಂಗುಟ ಹರಿದ ಚಪ್ಪಲಿಗೆ ಹೊಟ್ಟೆಯ ಸಿಟ್ಟು ಚಿಮ್ಮುತ್ತದೆ
ನಿನ್ನ ನೆನೆದಾಗಲೆಲ್ಲಾ ನೆನೆಯುತ್ತಲೆ ಹೋಗುತ್ತೇನೆ

ಅವ್ವನಮುರಿದ ಪೆಟಾರಿಯಲಿ ಮುಚ್ಚಿಟ್ಟ ಅಂಕಪಟ್ಟಿಗಳು
ಗೆದ್ದಲಗಳಿಗೆ ದಿನದೂಟ
ಹಣೆಗಚ್ಚಿಕೊಂಡು ತಿರುಗಿದರೆ ಕಸದ ಬುಟ್ಟಿಯೆಡೆಗೆ ತೋರುಬೆರಳು
ತೂತುಬಿದ್ದ ಬೊಕುಣದಲಿ ಗಾಂಧಿತಾತ ನಗುತ್ತಾನೆಯೇ ?
ನಿನಗೆ ಲಂಗ ಕೊಳ್ಳಲು ಆಕಾಶ ನೋಡಿದ ನಾನು ಶಾಪ ಹಾಕಿಕೊಂಡೆ
ಹಿಂಗಾರು ಮಳೆಗೆ ಗುಡಿಸಲು ತುಂಬ ಸಾವಿರ ನಲ್ಲಿಯ ಆರ್ಭಟ
ತೊಯ್ದ ಬಟ್ಟೆಯಲಿ ನಿಂತ ಮುದ್ದು ಭಾವಚಿತ್ರ ಹಸಿಯಾಗಿದೆ
ಜಗಲಿ ಮ್ಯಾಲಿನ ಮೂರೂ ಫೋಟೋ ಕಟ್ಟುಗಳು ಹೊಗೆಯಾಗಿವೆ
ಅಪ್ಪ ಚುಟ್ಟಾ ಸೇದುತ್ತಲೆ ನಿನ್ನ ಆತ್ಮದ ಕುಲಾವಿ ನೇವರಿಸುತ್ತಿದ್ದಾನೆ
ಹಂಚಿಟ್ಟ ಅವ್ವ ಧ್ಯಾನದಲೆ ರೊಟ್ಟಿಯ ಬದಲು ಕೈಯಿಟ್ಟಿದ್ದಾಳೆ

ಸಾವಿರ ಚೇಳು, ಉರಗ ಕಚ್ಚಿದರೂಪಾಪಿ ಬದುಕಿದ್ದೇನೆ
ಕೊನೆಯ ಮುಖ ನೋಡದೆ,
ನಾಲಿಗೆ ಹರಿದ, ಸೀಳು ಮೂಗಿನ, ಗಾಳಿಗೆ ತೇಲುವ ಮನುಷ್ಯರೇ ಬೇಕು
ಜಗದ ಅಪಮಾನಗಳನ್ನು ಹೊತ್ತು ತಿರುಗಲು
ನಿನ್ನ ಚೆಲುವಿಗೆ ಬೆಂಕಿ ಹಚ್ಚಿದ ಖೂಳರು ನನ್ನ ಮೂರು ಜನುಮದ ಯಜಮಾನರು
ಸೆಟೆದ ನಾಲಿಗೆ ಮಾತೆತ್ತಿದರೆ ತಿರುಗು ಯಂತ್ರಕೆ ಲಕ್ಷ ತುಕಡಿಗಳು
ನಾನು ಮಾತನಾಡುವ ಮೂಖ, ನೋಡುವ ಕುರುಡ, ಕೇಳುವ ಕಿವುಡ

ಮಹಲುಗಳ ಓಟಕೆ ಜೋಪಡಿ ಪಟ್ಟಿಗಳು ನರಳಿವೆ
ನಿನ್ನೆ ಕುಳಿತು ಉಂಡ ಜಾಗೆಯಲಿ ಪಿಲ್ಲರ್ಗಳೆದ್ದಿವೆ
ಬದುಕು ಕಪ್ಪೆ ಆಟ ನಿದ್ದೆಗಳನು ಬಿಡದು ರೋಲರ್ಗಳ ಸದ್ದು
ಜೀವ ಹಿಂಡುವ ಲೋಕಕೆ ಬಂದ ತಂಗಿ ಕ್ಷಮೆಯಿರಲಿ
ಸುಡುವ ಕಡಾಯಿಯಲಿ ಬಿದ್ದ ಕೈಗೆ ಸ್ಪರ್ಶ ಜ್ಞಾನವಿಲ್ಲ
ನಾಲ್ಕೆ ನಾಲ್ಕು ಹನಿ ಹನಿಸುವ ಶಕ್ತಿ ಕಣ್ಣುಗಳಿಗೆ
ಕಬರಸ್ತಾನ, ಸುಡುಗಾಡು ಸುತ್ತುತ್ತಲಿದ್ದೇನೆ
ಬೂದಿಯಾದರೂ ಸಿಕ್ಕೀತು ಎದೆಗಪ್ಪಿಕೊಳ್ಳಲೆಂದು

ಬಯಲ ಮೂರು ಹೊಲೆಗುಂಡುಗಳು
ಸುರಿದ ಬಿಸಿಲಿಗೆ ಅನ್ನ ಬೇಯುತ್ತಿದೆ
ಗುಂಪಲ್ಲಿ ಊರ ಜಾತ್ರೆಯ ಸಡಗರ
ಬಾಯಿಗೆ ಇಷ್ಟಿಷ್ಟು ತುತ್ತಿನ

ಸಿಲ್ವರ್ ತಾಟಿಡಿದ ಹರಿದ ಲಂಗದ ತಂಗಿ ಮತ್ತೆ ಕಂಡಳು
ದಾರಿ ಹೋಕರು ಬರುವ ಮುಂಚೆ
ದೂರ ಸಾಗಬೇಕಾಗಿದೆ
ತಂಗಿಗೊಂದು ಹೊಸ ಲಂಗ ತರಲು
ಮೈ ಉರಿಗೊಳಿಸಬೇಕಾಗಿದೆ ಕಾವಲಾಗಲು...
- ಬಸವರಾಜ ಹಳ್ಳಿ, ಹಸಮಕಲ್



ಭಾನುವಾರ, ಜೂನ್ 6, 2010

ಗ ಜ ಲ್



ಮನದ ಮೂಲೆಯೊಳಗೆ ಬಚ್ಚಿಟ್ಟೆ ನೂರು ಕನಸುಗಳ
ಸನಿಹವಿದ್ದು ಒಮ್ಮೆಯೂ ನೀ ಒಳಹೊಕ್ಕು ನೋಡಲಿಲ್ಲ.


ಪ್ರೀತಿ ರಕುತದಿ ಬರೆದೆ ಸಾವಿರ ಸಾವಿರ ಓಲೆಗಳ
ಕೈಗೆಟುಕಿದರೂ ಒಮ್ಮೆಯೂ ತಿರುವಿ ನೋಡಲಿಲ್ಲ.


ನಿನ ಅರಸಿ ಮರಭೂಮಿಯಲಿ ಬರಿಗಾಲಲಿ ಓಡಿದೆ
ಅಂಗಾಲಲಿ ಎದ್ದ ಗುಳ್ಳೆಗಳ ನೀ ಕಣ್ಣೆತ್ತಿ ನೋಡಲಿಲ್ಲ.


ಗೋಲಗುಂಬಜಿನಲಿ ನಿನ ಹೆಸರ ಸಾರಿ ಸಾರಿ ಕೂಗಿದೆ
ಏಳೇಳು ಬಾರಿ ಪ್ರತಿಧ್ವನಿಸಿದರೂ ನೀ ಕೇಳಲೇ ಇಲ್ಲ

ನಗುನಗುತಲಿ ಏನೂ ಹೇಳದೆ ಕೇಳದೆ ಹೋದೆಯಲ್ಲ
ನಿನ ಧ್ಯಾನದಲೇ ಕುಣಿಯೊಳಗಿದ್ದ ನನ್ನ ನೀ ನೋಡಲಿಲ್ಲ.

- ಬಸವರಾಜ ಹಳ್ಳಿ, ಹಸಮಕಲ್

ಶುಕ್ರವಾರ, ಏಪ್ರಿಲ್ 9, 2010

ಲಂಕೇಶ ಎಂಬ ಮಹಾಮಳೆ


ತಮ್ಮ ಸಮಕಾಲೀನ ಕಾಲ ಘಟ್ಟವನ್ನು ಬಹುವಾಗಿ ಪ್ರಭಾವಿಸಿದ ಪಾಳ್ಯದ ಲಂಕೇಶ ಮಹಾಮಳೆಯೇ ಸರಿ. ಗುಡುಗು, ಸಿಡಿಲಿನಿಂದ ಆರ್ಭಟಿಸಿ ಎಡೆಬಿಡದೆ ಧಾರಾಕಾರವಾಗಿ ಸುರಿದು ಊರ ಕೊಳಕು, ಕೊಚ್ಚೆ ಎಲ್ಲವನ್ನು ತೊಳೆದು, ಸಾಹಿತ್ಯದ ಹುಲುಸು ಬೆಳೆ ಬೆಳೆದವರು.ನೇರ, ನಿಷ್ಠುರತೆಯ ಪ್ರತಿರೂಪ. ಮಹಾಮಳೆಯಲ್ಲಿ ಅನೇಕರು ಮಿಂದೆದ್ದು ಹಿತಾನುಭವ ಅನುಭವಿಸಿದ್ದಾರೆ. ರಭಸಕ್ಕೆ ಕೆಲವರು ಮಳೆಯಲ್ಲೇ ಬೆವತಿದ್ದಾರೆ. ಲಂಕೇಶ ಮೇಷ್ಟ್ರು ಹೋಗಿ ಇಂದಿಗೆ ಹತ್ತು ವರ್ಷ ಒಂದು ತಿಂಗಳು ಎರಡು ದಿನ ಸಂದಿವೆ. ಆದರೂ ಇನ್ನೂ ಇದ್ದಾರೆನ್ನುವ ಮನೋಸ್ಥಿತಿ ಎಲ್ಲರಲ್ಲಿದೆ. ಅವರ ಅಭಿಮಾನಿ ಬಳಗ ಹಾಗೂ ಪ್ರಗತಿಪರ ಚಿಂತಕರು ಅವರ ಚಿಂತನೆಗಳನ್ನು ಮತ್ತೆ ಮತ್ತೆ ಮೆಲುಕು ಹಾಕುತ್ತಿರುವುದೇ ಅದಕ್ಕೆ ಸಾಕ್ಷಿ. ಪತ್ರಿಕೋದ್ಯಮ ಹಾಗೂ ಸಾಹಿತ್ಯದ ದಂತಕತೆ ಲಂಕೇಶ ಅವರ ವಿಚಾರಧಾರೆಗಳು ನಾಡಿನ ಬಹುತೇಕರನ್ನು ಪ್ರಭಾವಿಸಿದ್ದರಲ್ಲಿ ಎರಡು ಮಾತಿಲ್ಲ. ಅವರ ಮಾತಿಗೆ ಮತ್ತು ಲೇಖನಿಗ ಒಂದು ತೂಕವಿತ್ತು.ಎಂತವರನ್ನು ಎದುರು ಹಾಕಿಕೊಳ್ಳುವ ಅದಮ್ಯ ಧೈರ್ಯ.ಅದನ್ನು ಎಂದೂ ದುರುಪಯೋಗಪಡಿಸಿಕೊಂಡವರಲ್ಲ. ಅಸಹಾಯಕರ ಪರ ಮಿಡಿಯುವ ಹೃದಯವಿತ್ತು. ಲಂಕೇಶರು ಅನೇಕರನ್ನು ತೀರಾ ತೀರಾ ಹತ್ತಿರಕ್ಕೆ ಬಿಟ್ಟುಕೊಂಡಿದ್ದಾರೆ. ಎಡಬಿಡಂಗಿತನ ತೋರಿಸಿದಾಗ ಬಹುದೂರಕ್ಕೆ ಅಟ್ಟಿದ್ದಾರೆ. ಯಾರ ಮುಲಾಜು, ಓಲೈಕೆಗೆ ಮಣಿದವರಲ್ಲ. ಅವರಿಂದ ದೂರ ಸರಿದವರೆಲ್ಲಾ ಇಂದಿಗೂ ಲಂಕೇಶ ರನ್ನು ಗುರುಸ್ಥಾನದಲ್ಲಿಟ್ಟಿರುವುದೆ ಅವರ ವ್ಯಕ್ತಿತ್ವಕ್ಕೆ ಹಿಡಿದ ಕನ್ನಡಿ. 1980ರ ದಶಕದಲ್ಲಿ ಆರಂಭವಾದ ಲಂಕೇಶ ಪತ್ರಿಕೆ ಮೂಲಕ ಅವರು ಮಾಡಿದ ಸಾಮಾಜಿಕ ಕ್ರಾಂತಿ ಸಣ್ಣದಲ್ಲ.ಸಾಮಾನ್ಯ ಜನರ ನೋವು ವ್ಯಕ್ತಪಡಿಸಲು ಪತ್ರಿಕೆ ವೇದಿಕೆಯಾಯಿತು.ಸಕರ್ಾರವನ್ನು ನಡೆಸುವವರ ಬಗ್ಗೆ ಜನರಲ್ಲಿದ್ದ ಅಂಧ ಮನೋಭಾವನೆಯನ್ನು ಮೂಲೋತ್ಪಾಟನೆ ಮಾಡಿ, ಪ್ರಶ್ನಿಸುವ ಎಚ್ಚರ ಪ್ರಜ್ಞೆಯನ್ನು ಬೆಳೆಸಿದವರಲ್ಲಿ ಲಂಕೇಶರು ಮೊದಲಿಗರು. ರಾಜಕಾರಣಿಗಳ ಹುಳುಕುಗಳನ್ನು ಬಟಾಬಯಲುಗೊಳಿಸಿ ಜನರ ಧ್ವನಿಯಾಗಿ ನಿಲ್ಲುತ್ತಿದ್ದ ಅವರು ಒಂದೊಮ್ಮೆ ಸಕರ್ಾರವನ್ನು ಎದುರು ಹಾಕಿಕೊಂಡಿರುವ ಪ್ರಸಂಗಗಳು ನಡೆದಿವೆ.ಯಾರ ಬೆದರಿಕೆ, ಅಂಜಿಕೆಗೆ ಹೆದರದೆ ಆನೆ ನಡೆದದ್ದೆ ದಾರಿ ಎನ್ನುವಂತೆ ಮುನ್ನುಗ್ಗಿದವರು. ಪ್ರತಿವಾರವೂ ಲಂಕೇಶ ಪತ್ರಿಕೆಯನ್ನು ಒಪ್ಪಹೋರಣದಿಂದ ರೂಪಿಸುತ್ತಿದ್ದರು. ರಾಜಕೀಯಕ್ಕೆ ಸ್ವಲ್ಪ ಹೆಚ್ಚು ಪ್ರಾಧಾನ್ಯತೆ ಕೊಡುತ್ತಿದ್ದರೂ ಎನ್ನುವುದನ್ನು ಬಿಟ್ಟು ಅಂಕಣ ಬರಹಗಳು, ಯುವ ಬರಹಗಾರರ ಲೇಖನಗಳು, ಕವನ ಹಾಗೂ ಕತೆ ಹತ್ತ್ತು ಹಲವು ತೆರೆನಾಗಿ ರಂಗು ರಂಗಿನಿಂದ ಪತ್ರಿಕೆ ಹೊರಬರುತ್ತಿತ್ತು. ಪತ್ರಿಕೆ ಲಂಕೇಶರಿಗೆ ಮಗುವೇ ಆಗಿತ್ತು. ಪತ್ರಿಕೋದ್ಯಮದಲ್ಲಿ ಬೀಡು ಬೀಸಾಗಿ ನಡೆದಷ್ಟೆ ವೇಗವಾಗಿ ಸಾಹಿತ್ಯ ಕ್ಷೇತ್ರದಲ್ಲಿ ತಮ್ಮದೇ ಆದ ಚಾಪು ಮೂಡಿಸಿದರು. ಆಂಗ್ಲ ಉಪನ್ಯಾಸಕರಾಗಿದ್ದ ಲಂಕೇಶರು ಇಂಗ್ಲೀಷ್ ಬರಹಗಾರರನ್ನು ಅಪಾರವಾಗಿ ಓದಿಕೊಂಡಿದ್ದರು. ಆ ಹಿನ್ನೆಲೆಯಲ್ಲಿ ಬರೆದ ಅವರ ಅನೇಕ ಕಥೆಗಳು ಕನ್ನಡ ಸಾಹಿತ್ಯ ಲೋಕ ಹೊಸ ದಾರಿಯಲ್ಲಿ ಪಯಣಿಸುವಂತೆ ಮಾಡಿತು ಎನ್ನುವುದರಲ್ಲಿ ಸಂದೇಹವಿಲ್ಲ. ಅವರ ಮೊದಲ ಕಥಾ ಸಂಕಲನ ಕೆರೆಯ ನೀರನು ಕೆರೆಗೆ ಚೆಲ್ಲಿ 1963ರಲ್ಲಿ ಪ್ರಕಟವಾಯಿತು. 1964ರಲ್ಲಿ ಅವರ ನಾಟಕಗಳಾದ ಟಿ.ಪ್ರಸನ್ನನ ಗೃಹಸ್ಥಾಶ್ರಮ, ನನ್ನ ತಂಗಿಗೊಂದು ಗಂಡು ಕೊಡಿ ಹಾಗೂ ತೆರೆಗಳು ಪ್ರಕಟಗೊಂಡವು. ಹಾಗೂ ರಂಗದ ಮೇಲೂ ಅಭಿನಯಿಸಲ್ಪಟ್ಟವು. ಕಲ್ಲು ಕರಗುವ ಸಮಯ, ನಾನಲ್ಲ, ಉಮಾಪತಿಯ ಸ್ಕಾಲರ್ಷಿಪ್ ಯಾತ್ರೆ,ಉಲ್ಲಂಘಟನೆ ಮತ್ತು ಮಂಜು ಕವಿದ ಸಮಯ ಇವರ ಕಥಾ ಸಂಕಲನಗಳು. ಬಿರುಕು, ಮುಸ್ಸಂಜೆಯ ಕಥಾ ಪ್ರಸಂಗ ಮತ್ತು ಅಕ್ಕ ಕಾದಂಬರಿಗಳು. ಟೀಕೆ-ಟಿಪ್ಪಣೆ ಅಂಕಣ ಬರಹಗಳ ಸಂಗ್ರಹ. ಕಲ್ಲು ಕರಗುವ ಸಮಯ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆದ ಕಥಾ ಸಂಕಲನ. ಹೀಗೆ ಸಾಹಿತ್ಯ ಕ್ಷೇತ್ರದಲ್ಲಿ ತಮ್ಮನ್ನು ತೊಡಗಿಸಿಕೊಳ್ಳುವ ಮೂಲಕ ಅನೇಕ ಸಾಹಿತಿಗಳನ್ನು ಪ್ರಭಾವಿಸಿದರು. ಅವರ ಪ್ರಭಾವಕ್ಕೊಳಗಾದ ಸಾಹಿತಿಗಳು ಕೇಂದ್ರ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿಯನ್ನು ಪಡೆದಿದ್ದಾರೆ. ಬಹುಮುಖ ಪ್ರತಿಭೆ ಹೊಂದಿದ್ದ ಲಂಕೇಶರಿಗೆ ಕನ್ನಡ ಚಿತ್ರರಂಗಕ್ಕೆ ಸದಬಿರುಚಿಯ ಚಿತ್ರಗಳನ್ನು ಕೊಟ್ಟ ಕೀತರ್ಿ ಸಲ್ಲುತ್ತದೆ. ಅನುರೂಪ, ಖಂಡವಿದಕೊ ಮಾಂಸವಿದೆ ಕೊ, ಎಲ್ಲಿಂದಲೊ ಬಂದವರು, ಚಲನಚಿತ್ರಗಳನ್ನು ನಿದರ್ೇಶಿಸಿ ಸೈ ಎನಿಸಿಕೊಂಡರು. ಪಲ್ಲವಿ ಚಲನಚಿತ್ರಕ್ಕೆ ಕೇಂದ್ರ ಸಕರ್ಾರದ ಅತ್ಯುತ್ತಮ ನಿದರ್ೇಶಕ ಪ್ರಶಸ್ತಿಯೂ ಬಂತು. ಯು.ಆರ್. ಅನಂತಮೂತರ್ಿ ಅವರ ಕಾದಂಬರಿ ಆಧಾರಿತ ಸಂಸ್ಕಾರ ಚಿತ್ರದಲ್ಲಿ ನಾರಾಯಣಪ್ಪನ ಪಾತ್ರದಲ್ಲಿ ಅಭಿನಯಿಸಿ ಎಲ್ಲರ ಮೆಚ್ಚುಗೆಗಳಿಸಿದ್ದು ಈಗ ಇತಿಹಾಸ. ಎಲ್ಲಾ ರಂಗಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದ ಲಂಕೇಶ ಕ್ರೀಯಾಶೀಲತೆ ಎಂತಹದ್ದು ಎಂದು ಅವರ ಹುಳಿಮಾವಿನ ಮರ ಓದಿದಾಗ ತಿಳಿಯುತ್ತದೆ. ಏನಾದರೂ ಲಂಕೇಶರಿಗೆ ಲಂಕೇಶರೆ ಸಾಟಿ
- ಬಸವರಾಜ ಹಳ್ಳಿ, ಹಸಮಕಲ್

ಬುಧವಾರ, ಮಾರ್ಚ್ 11, 2009

ತಾಯಿಯಂತ ಅಣ್ಣ ನಾಗತಿಹಳ್ಳಿ ರಮೇಶಣ್ಣ (ಅವ್ವಣ್ಣಿ)

ಅಣ್ಣನ ಮುಖದಲ್ಲಿ ಸದಾ ನಗು.ಮಾತಿನಲ್ಲಿ ಅವ್ವನ ಕಕ್ಕುಲಾತಿ.ನೀಲಗಿರಿ ಮರದ ಪರ್ವತಗಳ ಕಡೆಯಿಂದ ಬಿಸಿಲೂರ ಕಡೆಯವರೆಗೂ ನಿಂತಲ್ಲಿ ನಿಲ್ಲದೆ, ಕುಂತಲ್ಲಿ ಕೂಡದೆ ಸದಾ ಜಲಪಾದಂತೆ ಹರಿದು ತಾಯಿಪ್ರೀತಿ ಹಂಚುತ್ತಾ ನೊಂದ ಜೀವಗಳಿಗೆ ಹಗಲನ್ನೆರಡು ತಾಸು ಮಿಡಿಯುವ ಜೀವವದು. ತನ್ನ ಸ್ವಸಾಮಥ್ರ್ಯದಿಂದ ನೋಡು ನೋಡುತ್ತಲೇ ಏಕಪ್ಯಾಂಟ್ನಿಂದ ಸಾವಿರು ಕೋಟುಗಳನ್ನು ಕೊಳ್ಳಬಲ್ಲಷ್ಟು ಎತ್ತರಕ್ಕೆ ಏರಿದ ಅಣ್ಣನಿಗೆ ಬದುಕಿನಲ್ಲಿ ಸಪ್ಪಗೆ ಸಾವಿರ ವರ್ಷ ಬದುಕಿದರೂ ಅರ್ಥವಿಲ್ಲ. ಏನಾದರೂ ಸಪ್ಪಳ ಮಾಡಿ ಸಾಧಿಸಿ ತೋರಿಸಬೇಕು. ಜೀವಂತ ದೇವರು ಅವ್ವನಿಗೆ ಹೆಸರು ತರಬೇಕೆನ್ನುವ ತುಡಿತ. ತಾಯಿ ಕಕ್ಕುಲಾತಿಯ ನಾಗತಿಹಳ್ಳಿ ರಮೇಶಣ್ಣನ ಕುರಿತು ನನ್ನ ಗುರುಗಳಾದ ಕಲಿಗಣನಾಥ ಗುಡದೂರು ಅವರಿಂದ ಕೇಳಲ್ಪಟ್ಟಿದ್ದೆ. ಆದಾದ ವಾರೊಪ್ಪತ್ತಿನಲ್ಲಿ. ಅಣ್ಣ ಸಿಂಧನೂರಿಗೆ ಬಂದೆಬಿಟ್ಟರು. ಅವರನ್ನು ಮೊದಲ ಬಾರಿಗೆ ಭೇಟಿಯಾದೆ. ಅಣ್ಣನ ಸ್ಪೂತರ್ಿದಾಯಕ ಮಾತುಗಳು,ಅಪರಿಚಿತರನ್ನು ಕ್ಷಣಮಾತ್ರದಲ್ಲಿ ವಷರ್ಾನುಗಟ್ಟಲೆ ಅವರೊಂದಿಗೆ ಇದ್ದವರೇನೋ ಎನ್ನುವಂತೆ ಆತ್ಮೀಯವಾಗಿ ಕಾಣುವಪರಿ ನನಗೆ ಆಶ್ಚರ್ಯ ಮೂಡಿಸಿತು. ಅಣ್ಣ ಅವ್ವನಿಗಾಗಿ ಬರೆದ ಸಮುದ್ರ ಮತ್ತು ಮಳೆಯನ್ನು ಹಿಡಿದು ಕುಳಿತರೆ ಸದಾ ಪಾದರಸದಂತೆ ಜಗದವ್ವನೊಡಲಲ್ಲಿ ಅಲೆಮಾರಿ ಅವ್ವಣ್ಣಿ (ರಮೇಶಣ್ಣ) ಹಾದು ಬಂದ ದಾರಿ ಹೋಗುತ್ತಿರುವ ಹಾದಿ ಎಲ್ಲವನ್ನು ಗಮನಿಸಿದಂತೆ ಎದೆಯಲ್ಲಿ ಸಮುದ್ರ ಮತ್ತು ಮಳೆಯ ಬೋರ್ಗರೆತ ಹೆಚ್ಚುತ್ತದೆ. ಕಪಾಳದ ತುಂಬೆಲ್ಲಾ ಕಣ್ಣೀರ ಜಿನುಗು ಮಳೆ. ಮರಣದ ನಂತರ ನಮ್ಮನ್ನು ನೆಲದೊಳಗಿನ ಗೋರಿಗಳೊಂದಿಗೆ ಕಾಣಬಾರದು, ಸಹಮಾನವರ ಎದೆಗಳಲ್ಲಿ ಕಾಣುವಂತಾಗಬೇಕು ಎನ್ನುವ ಜಲಾಲುದ್ದೀನ್ ರೂಮಿಯ ಉಕ್ತಿಯನ್ನು ಪ್ರಸ್ತಾಪಿಸಿರುವ ಅವ್ವಣ್ಣಿ ಅದರಂತೆ ಬದುಕುತ್ತಿದ್ದಾರೆ. ಅವ್ವಣ್ಣಿ (ರಮೇಶಣ್ಣ) ನೆಪ್ಪಿಗೆ ಬಂದಾಗಲೆಲ್ಲಾ ಅಣ್ಣಾವ್ರ ಕಸ್ತೂರಿ ನಿವಾಸ ಸಿನಿಮಾ ಮನಪಟಲದಲ್ಲಿ ಮೂಡುತ್ತದೆ. ಅಣ್ಣನನ್ನು ಭೇಟಿಯಾಗಿ ಇಂದಿಗೆ ಸುಮಾರು 20 ದಿನಗಳು ಕಳೆದವು. ಈಗ ಮತ್ತೆ ಮತ್ತೆ ಹೆತ್ತವ್ವ ನೆನೆಪಾಗುತ್ತಾಳೆ. ಆಗಾಗ ಕೆಲಸಕ್ಕೆ ಸಲಾಂ ಹೊಡೆದು ಊರ ಕಡೆ ಓಡಿ ಮತ್ತೆ ಹಿಂತಿರುಗುತ್ತೇನೆ. ಅಣ್ಣ ನನಗೆ ಒಂದು ಪಾಠವಾದ. ಅಣ್ಣ (ಅವ್ವಣ್ಣಿ) ನಂತವರಿಗೆ ಜಗದವ್ವನ ಆಶೀವರ್ಾದ ಇದ್ದೆ ಇರುತ್ತದೆ.

ಅಣ್ಣನ ಸಣ್ಣ ಕವಿತೆ

ರಾಗಿ, ಭತ್ತ

ಹುಟ್ಟುತ್ತ ಬೆಳೆಯುತ್ತ

ಆಗಸವನ್ನೇ ದಿಟ್ಟಿಸುತ್ತವೆ

ಫಲದ ಹೊನ್ನ ಕಿರೀಟ

ಮೈದುಂಬಿಕೊಂಡಾಗ
ನೆಲದತ್ತ ತಲೆ ಬಾಗುತ್ತವೆ.
- ನಾಗತಿಹಳ್ಳಿ ರಮೇಶ
*************************
ನನ್ನವ್ವ ಅಸಂಖ್ಯಾತ ಕನಗಳನ್ನು ಬಾಳಿದಳು
ಆಕೆ ಒಂದನ್ನೂ ಬರೆಯಲಿಲ್ಲ.
ನಾನಾದರೋ ನನ್ನದರ ಜೊತೆಗೆ ಆಕೆಯದನ್ನೂ ಬರೆದೆ.
ತಾಯಿಯ ಎದೆಯಲ್ಲಿ ಮೌನವಾಗಿ ಮಲಗಿದ ಹಾಡು
ಮಗುವಿನ ತುಟಿಯಲ್ಲಿ ಹಾಡುತ್ತದೆ.
- ಖಲೀಲ ಗಿಬ್ರಾನ್.
- ಬಸವರಾಜ ಹಳ್ಳಿ

ಸೋಮವಾರ, ಫೆಬ್ರವರಿ 16, 2009

ಗುಡದೂರು "ಮಾಮೂಲಿಗಾಂಧಿ"




ಬಹಳ ಜತನದಿಂದ ಬರೆದ ಕಥೆಗಳನ್ನು 'ಮಾಮೂಲಿ ಗಾಂಧಿ' ರೂಪದಲ್ಲಿ ಕೊಡಲು ಸಜ್ಜಾಗಿರುವ ನನ್ನ ಗುರುಗಳು ಹಾಗೂ ಕಥೆಗಾರರು ಆದ ಕಲಿಗಣನಾಥ ಗುಡದೂರು ಮೂರನೇ ಕಥಾ ಸಂಕಲನದಲ್ಲಿ ಹೊಸ ಜಾಡು ಹಿಡಿದಿದ್ದಾರೆ. ಈ ಹಿಂದಿನ ಕಥಾ ಸಂಕಲನಗಳಲ್ಲಿ ರಾಯಚೂರು ಭಾಗದ ಜನರ ಜವಾರಿ ಭಾಷೆಯನ್ನೆ ಜೀವಾಳವಾಗಿಸಿಕೊಂಡು ಕನ್ನಡ ಕಥಾಲೋಕಕ್ಕೆ ಹೊಸ ಕಥೆಗಳನ್ನು ಪೋಣಿಸಿರುವ ಅವರು ಈ ಸಲ ಮತ್ತಷ್ಟು ವಿಭಿನ್ನ ಪ್ರಯೋಗಳನ್ನು ಮಾಡಿದ್ದಾರೆ. ಬದಲಾದ ಶೈಲಿಯ ಮೂಲಕ ನೂತನ ಕಥಾವಸ್ತುವಿನೊಂದಿಗೆ ಅವರಲ್ಲಿನ ಕತೆಗಾರ ಈ ಬಾರಿ ಮಗ್ಗಲು ಬದಲಿಸಿದ್ದಾನೆ. ಈ ಹಿಂದಿನ ಸಂಕಲನದ ಕಥೆಗಳನ್ನು ಓದಿದವರು "ಮಾಮೂಲಿ ಗಾಂಧಿ" ಸಂಗ ಮಾಡಿದರೆ ಇದು ಗುಡದೂರರ ಕಥಾ ಸಂಕಲನವಾ ? ಎಂದು ಸಂಶಯಪಡುವಷ್ಟು ಕಲರ್ಫುಲ್ ಆಗಿದೆ. ಅವರ ಕಥೆಗಳು ಇನ್ನೂ ಅಚ್ಚಿಗೆ ಹೋಗುವ ಮುಂಚೆ ಮೂರ್ನಾಲ್ಕು ಬಾರಿ ಓದಿರುವ ನನಗೆ ಒಂಥರದ ಖುಷಿ. ಕೆಲ ಕಥೆಗಳನ್ನು ನನಗೆ ಹೇಳುತ್ತ ..ಹೇಳುತ್ತಲೆ...ಕಂಪ್ಯೂಟರ್ನಲ್ಲಿ ಟೈಪಿಸಿದ್ದುಂಟು. ಸಂಕಲನದ ಕಥೆಗಳು ಪ್ರಜಾವಾಣಿ ಸಾಪ್ತಾಹಿಕ, ಮಯೂರ, ಸಂಡೆ ಇಂಡಿಯನ್, ವಿಕ್ರಾಂತ ಕನರ್ಾಟಕ ಸೇರಿದಂತೆ ನಾಡಿನ ಪ್ರಮುಖ ಪತ್ರಿಕೆಗಳಲ್ಲಿ ಬೆಳಕು ಕಂಡಿವೆ. ತಮ್ಮ ವಿಶಿಷ್ಠ ಕಥೆಗಳ ಮೂಲಕ ವಾರಿಗೆಯ ಬರಹಗಾರರಲ್ಲಿ ಅಚ್ಚರಿ ಮೂಡಿಸಿರುವ "ಮೇಷ್ಟ್ರ" ಮಾಮೂಲಿ ಗಾಂಧಿ" ಗೆ ಇಷ್ಟರಲ್ಲಿ ಬಿಡುಗಡೆಯಿದೆ.ಕವಿ, ಕಥೆಗಾರ ವಿ.ಎಂ.ಮಂಜುನಾಥ ಅದ್ಬುತವಾಗಿ ಮುಖಪುಟ ರಚಿಸಿಕೊಟ್ಟಿದ್ದಾರೆ. ಕವಿ ವಿ.ಆರ್.ಕಾಪರ್ೆಂಟರ್ ಕರಡು ತಿದ್ದುವಲ್ಲಿ ಸಹಕರಿಸಿದ್ದಾರೆ. ಅವರಿಗೆ ತುಂಬಾ ಧನ್ಯವಾದ. ಸದಾ ಕಥೆಗಳಂತೆ ಬದುಕುವ, ತಮ್ಮ ಆಜುಬಾಜಿನ ಯುವಕರಿಗೆ ಸಾಹಿತ್ಯದ ಕಿಚ್ಚುಹಚ್ಚಿ ಸಾಹಿತ್ಯದಲ್ಲಿ ತೊಡಗುವಂತೆ ಹುರಿದುಂಬಿಸುವ "ಮೇಷ್ಟ್ರ" ಪ್ರೀತಿಯ ಕಾಳಜಿಗೆ ಧನ್ಯವಾದ ಹೇಳುತ್ತಾ ಅವರ ಮಾಮೂಲಿ ಗಾಂಧಿಗಾಗಿ ಕಾಯುತ್ತಿದ್ದೇನೆ.
- ಬಸವರಾಜ ಹಳ್ಳಿ

ಗುರುವಾರ, ಫೆಬ್ರವರಿ 12, 2009

ಅಕ್ಕನ ನೆನಪಲ್ಲಿ ನಾಲ್ಕು ಬಿಕ್ಕಳಿಕೆಗಳು



ಸಿಂಧನೂರಿನ ರಸ್ತೆಯ ಎಡಬಲಗಳಲ್ಲಿ ಜೈನ್ದೀಕ್ಷೆ ಪಡೆಯಲಿರುವ ಅಕ್ಕ ಸೋನಲ್ ನಾಹರ ಭಾವಚಿತ್ರಗಳು ರಾರಾಜಿಸುತ್ತಿವೆ. ಚಿತ್ರಗಳಲ್ಲಿ ಅಕ್ಕ ಮೆಹಂದಿ ಹಚ್ಚಿದ ಕೈಗಳನ್ನು ಕೊನೆಯದಾಗಿ ದಾರಿಹೋಕರಿಗೆಲ್ಲಾ ತೋರಿಸುತ್ತಿದ್ದಾಳೆ. ಅಕ್ಕನ ಮುಖದಲ್ಲಿ ಇನ್ನೂ ನಗು ಇದೆ. ಎಲ್ಲ ಕರುಳ ಬಳ್ಳಿಗಳನ್ನು ಕಳೆದುಕೊಂಡು ಅಕ್ಕ ದೂರ ಹೋಗಲು ಸಿದ್ದಳಾಗಿದ್ದಾಳೆ. ನನಗೆ ಅನಿಸಿದ ಹಾಗೆ ಜಗತ್ತಿನ ಕಠಿಣ ಪದ್ದತಿಗಳಿರುವುದು ಜೈನ ಸಮುದಾಯದಲ್ಲಿ.ದೀಕ್ಷೆ ಪಡೆದವರು ಸೂರ್ಯ ಮುಳುಗು ಮುಂಚೆ ನೀರು ಕುಡಿಯಬೇಕು. ಊಟ ಮಾಡಬೇಕು.ಎಷ್ಟು ದೂರವಾದರೂ ಕಾಲ್ನಡಿಗೆಯಲ್ಲೆ ಸಾಗಬೇಕು. ಮೈಮೇಲಿನ ಕೂದಲುಗಳನ್ನು ಕೈಯಿಂದ ಕಿತ್ತುಕೊಳ್ಳಬೇಕು. ಕೊನೆಗೆ ಸಲ್ಲೇಖನ ವೃತದ ಮೂಲಕ ಪ್ರಾಣ ಅಪರ್ಿಸಬೇಕು.ಅಬ್ಬಬ್ಬಾ.. ಕೇಳಿದರೆ ಉಸಿರುಗಟ್ಟಿದಂತಾಗುತ್ತದೆ. ಹೀಗೆ ಇದ್ದು ಪಡೆಯುವ ದುಃಖಕ್ಕಿಂತ ಕರೆದು ಪಡೆಯುವ ದುಃಖದಲ್ಲಿ ಅಕ್ಕನಿಗೆ ಖುಷಿ. ಅಕ್ಕನ ಸುತ್ತ ಯಾವ ಗೋಡೆಗಳಿಲ್ಲ. ಬಣ್ಣಗಳಿಲ್ಲ. ಇರುವುದೊಂದು ಭೂಮಿ. ಜೀವಿಗಳು.ಜಗದ ಸುಖಲೋಲುಪತೆಯನ್ನು ಅಕ್ಕ ಜಾಡಿಸಿ ಒದ್ದಿದ್ದಾಳೆ. ಮೇರೆಗಳನ್ನು ಕಿತ್ತೊಗೆದು ಅಹಿಂಸೆ ಕೊಡವಿಡಿದು ಪಾರಿವಾಳದ ಹಾಗೆ ಹಾರ ಹೊರಟಿದ್ದಾಳೆ. ಜೈನ ಸಮುದಾಯದ ಗುರುಗಳಿಂದ ದೀಕ್ಷೆ ಪಡೆದು ನಂತರ ಹುಟ್ಟಿದ ಊರಿಗೆ ಬರುವುದು 10 ವರ್ಷಕ್ಕೋ 20ವರ್ಷಕ್ಕೋ. ಅದು ಕಾಲ್ನಡಿಗೆಯಲ್ಲಿ. ಬಂದರೂ ಬರಬಹುದು ಇಲ್ಲದಿದ್ದರೆ ಇಲ್ಲ. ಸೋನಾಲ್ ನಾಹರ ಸಹೋದರಿಯರಾದ ಪ್ರಿಯಸ್ವಣರ್ಾಂಜನ ಶ್ರೀಜಿ 1995 ಫೆಬ್ರುವರಿ 13ರಂದು ಮಧ್ಯಪ್ರದೇಶದ ಇಂದೋರ್ ನಗರದಲ್ಲಿ, 2004ರಲ್ಲಿ ಪ್ರಿಯಶ್ರೇಷ್ಠಾಂಜನಾ ಶ್ರೀಜಿ ಆಂಧ್ರಪ್ರದೇಶದ ಆದೋನಿ ಸಮೀಪದ ಪೆದ್ದತುಂಬಲಂ ಗ್ರಾಮದ ಪಾಶ್ರ್ವಮಣಿ ದೇವಸ್ಥಾನದಲ್ಲಿ ದೀಕ್ಷೆ ಪಡೆದಿದ್ದರು. ಸದ್ಯ ಅಕ್ಕ ಸೋನಾಲ್ ನಾಹರ ಫೆ.15 .2009ರಂದು ದೀಕ್ಷೆ ಪಡೆಯುತ್ತಿದ್ದಾರೆ. ದೀಕ್ಷಾ ಸಮಾರಂಭಕ್ಕೆ ಇಡೀ ನಗರದ ಜೈನ ಸಮುದಾಯವೇ ಸಜ್ಜಾಗಿದೆ. ಈ ಬಗ್ಗೆ ಕಳೆದೆರಡು ದಿನಗಳ ಹಿಂದೆ ನಮ್ಮ ಪತ್ರಿಕೆಯಲ್ಲಿ ವರದಿ ಮಾಡಲು ಸಮಾರಂಭದ ಆಹ್ವಾನ ಪತ್ರಿಕೆ ಹಿಡಿದು ಅಕ್ಕನ ಮುಖ ನೋಡಿದಾಗ ಹನಿಗಳೆರಡು ಉದುರಿದವು. ನನ್ನ ಅಕ್ಕ,ತಂಗಿ ನೆನಪಾದರು.


-ಬಸವರಾಜ ಹಳ್ಳಿ


ಮಂಗಳವಾರ, ಫೆಬ್ರವರಿ 3, 2009

ಬದುಕು ಹಸಿರಾಗಿಸಿದ ಕುಡುಗೋಲು


ಬದುಕು ಹಸಿರಾಗಿಸಿದ ಕುಡುಗೋಲು ನಾನು ನಿನ್ನನ್ನು ಪದೇ ಪದೇ ನೆನೆಪಿಸಿಕೊಳ್ಳುವಂತಾಗಿದೆ. ಸಿಟ್ಟಿನಲ್ಲಿ ನಾನು ಎಸೆದಿದ್ದ್ದು ಖರೆ. ಆದರೆ ನನಗೆ ನಿನ್ನ ತಾಕತ್ತು ,ಮಾಡಿದ ಉಪಕಾರ ಎಳ್ಳಷ್ಟು ಗೊತ್ತಿರಲಿಲ್ಲ. ಅದಕ್ಕೆ ನನ್ನ ಕೈ ಬೆರಳುಗಳಲ್ಲಿ ಈಗಿಗ ಹರಿದಾಡುತ್ತಿರುವ ನೋಟುಗಳು ಕಾರಣವೆನಿಸುತ್ತದೆ.ನಾನು ಮೊದಲಿನಂತಿಲ್ಲ ಹೌದು. ಮಾತಿಗೊಮ್ಮೆ ಯಾರ್ಯಾರ ಮುಂದೆ ಪ್ರತಿ ಬೆರಳಿಗಿಟ್ಟ ಉಂಗುರ, ಕೊರಳಿಗೆ ಹಾಕಿದ ಬಂಗಾರದ ಚೈನು ಎಲ್ಲ ಪ್ರದಶರ್ಿಸುತ್ತಿದ್ದೇನೆ. ರೂಪಾಯಿ ರೂಪಾಯಿಗೂ ಅಲೆದ ದಿನಗಳು ಮರೆತಂತಿದ್ದೇನೆ. ತಲೆಯಲ್ಲಿ ಅಹಂ ತೊಂಬತ್ತು ಡಿಗ್ರಿ ದಾಟಿದೆ ನಿನ್ನ ಜೊತೆಗಾತರ್ಿ ಅವ್ವ ಮೂಲೆ ಹಿಡಿದಿದ್ದಾಳೆ.ಆದರೂ ಅವ್ವನ ಕೈಗಳು ದಿನವೂ ನಿನ್ನ ಸ್ಪರ್ಶಕ್ಕೆ ಹಾತೊರೆಯುತ್ತವೆ. 'ಮಾಡುತ್ತಾಳಂತೆ ಕೆಲಸ ಬುದ್ದಿಗಿದ್ದಿ ಇದಿಯೇ ನಿಂಗೆ' ಎಂದು ನಾನು ಬೈದಾಗಲೊಮ್ಮೆ ಎರಡ್ಮೂರು ದಿನ ಮಾತುಬಿಟ್ಟು ಮತ್ತೆ ಬಯ್ಯುತ್ತೇನೆಂಬ ಭಯವಿದ್ದರೂ ಅದೇ ಮಾತಾಡುತ್ತಾಳೆ. ನಿನ್ನೊಂದಿಗಿದ್ದಷ್ಟು ಅವ್ವನ ಒಡನಾಟ ಮನೆಯ ಯಾರೊಂದಿಗಿಲ್ಲ.ನೀನು ಅವ್ವ ದುಡಿದು ಕುಟುಂಬಕ್ಕೆ ಕೂಳು ಹಾಕಿದಿರಿ. ನನ್ನ ಓದಿಗೆ ನಿನ್ನ ಸಹಾಯ ನೆನೆಸಿಕೊಂಡರೆ ಕಣ್ಣಾಲಿಗಳಲ್ಲಿ ನೀರಾಡುತ್ತವೆ. ಅವತ್ತು ಏನೋ ಕಾರಣಕ್ಕೆ ಬಂದ ಸಿಟ್ಟು ತಡೆದುಕೊಂಡಿದ್ದರೆ ನಿನ್ನನ್ನು ಬದುಕಿಸಬದಿತ್ತೇನೋ? ನನಗೀಗ ದೊಡ್ಡ ಪ್ರಮಾದವೆಸಗಿದ ಪಾಪಪ್ರಜ್ಞೆ ಕಾಡುತ್ತಿದೆ. ನಾನು ಎಸೆದ ರಭಸಕ್ಕೆ ಪುಡಿ ಪುಡಿಯಾದ ನಿನ್ನನ್ನು ಕಂಡು ಅವ್ವ ಮರುಗಿದ ಪರಿ ಹೇಳಲಸಾಧ್ಯ. ಬಹಳ ಜತನದಿಂದ ನಿನ್ನನ್ನು ತನ್ನ ಮಗನೆಂಬಂತೆ ನೋಡಿಕೊಂಡು ಬಂದಿದ್ದ ಅವ್ವ ಬಹಳ ಸಿಟ್ಟಿನಿಂದ ಅವತ್ತು 'ನೀನು ಇವತ್ತ ಸಕರ್ಾರಿ ನೌಕ್ರಿ ಮಾಡಿ 15 ಸಾವಿರ ಎಣಿಸ್ತಿ ಅಂದ್ರ ಆ ಕುಡಗೋಲ ಕಾರಣ. ನಿನ್ನ ಸಾಲಿ ಪೀಸು ಅದ್ರಲ್ಯ ದುಡಿದು ಕಟ್ಟೀನೇ ಲೋ' ಎಂದಾಗ ನನಗೆ ಮಾತೆ ಹೊರಡಲಿಲ್ಲ. ನನಗೀಗ ಜ್ಞಾನೋದಯವಾದಂತಾಗಿದೆ.ವಿದ್ಯ,ಬುದ್ದಿ ದಯಪಾಲಿಸಿ, ನನ್ನ ಜೀವನ ಹಸಿರಾಗಿಸಿದ ನಿನಗೆ ನನ್ನ ಪ್ರಣಾಮಗಳು. ನಾನು ಏನಾದರೂ ಗೀಚುವಾಗಲೊಮ್ಮೆ ನನ್ನ ಪೆನ್ನಿಗೆ ಶಕ್ತಿ ತುಂಬಿದ ನೀನು ಹೊಳೆಯುವ ಆಕಾರದಲ್ಲಿ ಮೂಡಿಬರುತಿ.್ತ ಕವನಗಳಲ್ಲಿ ಇಣುಕುತ್ತಿ. ನನ್ನಿಂದ ತಪ್ಪಾಗಿದೆ ಕ್ಷಮಿಸಿಬಿಡು ನಿನ್ನ ಆತ್ಮಕ್ಕೆ ಶಾಂತಿ ಕೋರಿ ದೇವರಲ್ಲಿ ಮೊರೆಯಿಡುತ್ತಿದ್ದೇನೆ.

ಬಸವರಾಜ ಹಳ್ಳಿ

ಗುರುವಾರ, ಜನವರಿ 29, 2009

ಒಂದು ಖಾಸಗಿ ಪತ್ರ



ಒಂದು ಖಾಸಗಿ ಪತ್ರ



ಪ್ರೀತಿಯ ಟ್ರೀ 5 ಪ್ರಕಾಶನದಅಣಾವ್ರಿಗೆ ನಮಸ್ಕಾರಗಳು


ತಮ್ಮ ಪ್ರಕಾಶನದಲ್ಲಿ ಹೊರತಂದಿರುವ ಥೇಟ್ ನನ್ನ ಗೆಳೆಯ ಕಾಪರ್ೆಂಟರ್ ಮಲ್ಲಿಯಂತಿರುವ ವಿ.ಆರ್.ಕಾಪರ್ೆಂಟರ್ರ ಕವನ ಸಂಕಲನ 5ನೇ ಗೋಡೆಯ ಚಿತ್ರಗಳು ನನ್ನ ಬಹುವಾಗಿ ಆಕಷರ್ಿಸಿತು. ಕಥೆ, ಕವನ, ಹನಿಗವನ ಹೀಗೆ ಸಾಹಿತ್ಯದ ಹರದಾರಿಯಲ್ಲಿ ಅಂಬೆಗಾಲಿಡುತ್ತಿರುವ ನಾನು ಈ ಕವನ ಸಂಕಲನವನ್ನು ನನ್ನ ಗುರುಗಳಾದ ಕಥೆಗಾರ ಕಲಿಗಣನಾಥ ಗುಡದೂರ ಅವರಿಂದ ಪಡೆದಿದ್ದೆ. ಅವರಿಂದ ಪಡೆದ ತಾಸೊಪ್ಪತ್ತಿನೊಳಗೆ ಕವನ ಸಂಕಲನದ ಒಪ್ಪ , ಓರಣವನ್ನು ಇಂಚಿಚು ಗಮನಿಸಿದೆ. ಏನೋ ಹೊಸತನ ಕಂಡಿತು. ಇದರಲ್ಲಿ ವಿ.ಎಂ.ಮಂಜುನಾಥರ ಕೈಚಳಕ ಢಾಳಾಗಿ ಕಂಡುಬಂತು. ಒಂದು ಉತ್ತಮ ಕವನ ಸಂಕಲನಕ್ಕೆ ಕಲೆಯ ಕೈ, ಖಚರ್ು ಮಾಡುವ ಕೈ, ಬರೆಯುವ ಕೈ ತ್ರಾಸುಪಟ್ಟಿರುವುದು ಓದಿ, ನೋಡಿ ಕಂಡುಕೊಂಡೆ. ಕವನ ಸಂಕಲನ ಸಿಕ್ಕ ದಿನದ ಮಧ್ಯಾಹ್ನವೇ ಪ್ರಕಾಶನದ ಹೊಣೆ ಹೊತ್ತಿರುವ ತಮಗೆ ಒಂದು ಪೋನು ಹೊಡೆದೆ. ಅಂದು ಉಡುಪು ತಯಾರಿಕೆ ಕಾಖರ್ಾನೆಯಲ್ಲಿ ಕೆಲಸದಲ್ಲಿದ್ದ ತಮಗೆ ಸ್ವಲ್ಪ ತೊಂದರೆ ಕೊಟ್ಟೆ ಅನಿಸುತ್ತೆ. ಒಂದೆ ಸಮನೆ ನನಗನಿಸಿದ್ದನ್ನು ನನ್ನ 8 ನಿಮಿಷ 10 ಸೆಕೆಂಡುಗಳ ಸಂಭಾಷಣೆಯಲ್ಲಿ ತಮಗೆ ತಿಳಿಸಿದೆ. ತಾವು ಈ ಸಮಯದಲ್ಲಿ ಭಾವುಕರಾಗಿದ್ದಂತೆ ಕಂಡುಬರುತ್ತದೆ. ತಾವು ನಡೆದು ಬಂದ..ನಡೆಯುತ್ತಲಿರುವ...ಮುಳ್ಳುಕಂಟಿಯ ದಾರಿಯ ಬಗ್ಗೆ ನನಗೆ ಹೇಳಿದ ಮೇಲೆ ಅರ್ಥವಾದದ್ದು. ನಾನು ಮೊದ ಮೊದಲು ತಮ್ಮ ಪ್ರಕಾಶನದಿಂದ ಇದೇ ಮೊದಲ ಕವನ ಸಂಕಲನವೇನು ಎಂದು ತಿಳಿದಿದ್ದೆ. ವಿ.ಎಂ.ಮಂಜುನಾಥರ ಬ್ರಾಂಡಿ ಕಥಾಸಂಕಲನ, ಉಗಮ ಶ್ರೀನಿವಾಸರ ಒಂದು ಬಟ್ಟೆ ಚೂರು ಕವನ ಸಂಕಲನ ಜೊತೆಗೆ ಇನ್ನೊಂದು ಸಂಕಲನ ತಂದಿರುವುದಾಗಿ (ಹೆಸರು ನೆನಪಿಲ್ಲ) ಹೇಳಿದಾಗ ಆಶ್ಚರ್ಯ ಚಕಿತನಾದೆ. ಉಡುಪು ಕಾಖರ್ಾನೆಯಲ್ಲೇ ದುಡಿದು ಕುಟುಂಬ ನಿರ್ವಹಣೆ ಜೊತೆಗೆ ಅದರಲ್ಲೇ ಹಣ ಉಳಿಕೆ ಮಾಡುತ ಈ ರೀತಿ ಸಾಹಿತ್ಯದ ಸೇವೆ ಮಾಡುತ್ತಿರುವ ನಿಮ್ಮಂತವರು ನಮಗೆ ಸ್ಪೂತರ್ಿಯ ಸೆಲೆ. ನಾನು ಓದಿದ್ದು ಬಿ.ಎ.ಕಾಲೇಜು ಬಿಟ್ಟು ಮೂರು ವರ್ಷವಾಯ್ತು. ನನ್ನ ವಯಸ್ಸಿನ ಗೆಳೆಯರು ಸಂಬಳ, ಗಿಂಬಳ ಅಂತ ಏನೇನೂ ಎಣಿಸುತ್ತಿದ್ದಾರೆ. ಓದುವಾಗ ಮನೆಯವರ ಹಸಿವು ಕಾಡಿಸಿತು. ಮತ್ತೆ ಓದುಬೇಕು ಎನ್ನುವಾಗ ಮೀಸೆ, ಆಸೆ ಎಲ್ಲ ಚಿಗುರಿದೆ ದುಡಿದು ದುಡಿದು ಹಣ್ಣಾಗಿರುವ ಅವ್ವನ ಮುಖ, ಹೊಲದಲ್ಲಿ ಗಳೇವು ಹೊಡೆದು ಹೊಡೆದು ಸಾಕಾಗಿರವ ಅಪ್ಪ ಇನ್ನು ಓದುತ್ತಿರುವ ತಮ್ಮ, ತಂಗಿ ಕಣ್ಣು ಕಾಣದ ದೊಡ್ಡವ್ವ ಎಲ್ಲರನ್ನೂ ದಿಟ್ಟಿಸಿ ನೋಡಿದರೆ ಯಂತ್ರದಂತೆ ದುಡಿದು ರೊಕ್ಕ ಎಣಿಸುತ್ತ ಇರಬೇಕೆನಿಸುತ್ತದೆ. ಒಬ್ಬ ಅಣ್ಣನಂತೆ, ಅಷ್ಟಕ್ಕೂ ನನ್ನ ಕಷ್ಟಕ್ಕೂ ಪಾಲುದಾರರಂತೆ ಸದಾ ಕೈ ಹಿಡಿದು ನಡೆಸುತ್ತಿರುವ, ಬೆಳಕಿನ ಪ್ರತಿರೂಪದಂತಿರುವ ಗುರು ಕಲಿಗಣನಾಥ ಗುಡದೂರರು ತಮ್ಮ ಸುದ್ದಿಬಿಂಬ ಪತ್ರಿಕೆಯಲ್ಲಿ ವರದಿಗಾರಿಕೆಯನ್ನು ನೀಡಿ , ತೀಡಿ ನನಗೊಂದಿಷ್ಟು ಬದುಕಲು ದಾರಿ ಮಾಡಿಕೊಟ್ಟಿದ್ದಾರೆ. ಬರುವ 2500ರೊಳಗೆ ಮನೆಗೊಂದಿಷ್ಟು ತಮ್ಮನ, ತಂಗಿಯ ಓದಿಗೊಂದಿಷ್ಟು ಖಚರ್ು ಮಾಡುತ್ತಾ ಪತ್ರಿಕೆಯ ತಾಲ್ಲೂಕ ಮಟ್ಟದ ಪತ್ರಿಕೆಯ ವರದಿಗಾರಿಕೆಯಲ್ಲಿ ಕಾಲ ನೂಕುತ್ತಿರುವೆ. ಇದಕ್ಕೂ ಮುಂಚೆ ರಾಯಚೂರಿನ ಜಿಲ್ಲಾ ಮಟ್ಟದ ಪತ್ರಿಕೆ ಸುದ್ದಿಮೂಲಪತ್ರಿಕೆಯಲ್ಲಿ ಗುರುಗಳ ಅಣತಿಯಂತೆ ಕೆಲಸ ಮಾಡಿದೆ. ಆದರೆ ಅಲ್ಲಿ ಕೇವಲ 2000ಕ್ಕೆ ದಿನದ 18ಗಂಟೆ ಒಂದು ವರ್ಷವಿಡೀ ದುಡಿದೆ. ಕೊನೆಗೆ ಸಾಕಾಗಿ ಹೇಳದೆ ಕೇಳದೆ ಊರಿನ ಹಿಡಿದೆ. ಹೊಲದಲ್ಲಿ ಕಬ್ಬಕ್ಕಿ ಓಡಿಸಿ ಓಡಿಸಿ ಸಾಕಾಗಿ ಅಪ್ಪ ಬೈಯ್ದನೆಂದು ಮುನಿಸಿಕೊಂಡು ದುಡಿದೇ ತೀರುತ್ತೇನೆಂದು ಬ್ಯಾಗಿಡಿದು 2007ರಲ್ಲಿ ಬೆಂಗಳೂರಿನ ಹೊಸೂರು ರಸ್ತೆಯಲ್ಲಿರುವ ಗಾಮರ್ೆಂಟ್ ಪ್ಯಾಕ್ಟರಿ ಶಾಹಿ ಎಕ್ಸ್ಪೋಟರ್್ ಲಿಮಿಟೆಡ್ ಬ್ರಾಂಚ್ ನಂ.1ರಲ್ಲಿ ಸ್ನೇಹಿತನ ರೊಂ ನಲ್ಲಿದ್ದು 3 ತಿಂಗಳು ಕಂಪ್ಯೂಟರ್ ವಿಭಾಗದಲ್ಲಿ ದುಡಿದೆ. ಪ್ಯಾಕ್ಟರಿಯೊಳಗಿನ ಜಗಳ, ದಬಾಯಿಸುವಿಕೆಗೆ ಒಮ್ಮೊಮ್ಮೆ ಮೂಕಪ್ರೇಕ್ಷಕನಾಗುತ್ತಿದ್ದ. ನಮ್ಮಂತವರಿಗೆ ಇದು ಊರು ಅಲ್ಲ. ಇಲ್ಲಿನ ಕೆಲಸವೂ ಚಲೋ ಅಲ್ಲ ಎಂದ ಪೇಮೆಂಟು, ಓಟಿ ಪೇಮೆಂಟು ಜೊತೆಗೆ ಗೆಳೆಯನಿಗೂ ಹೇಳದೆ ಕೇಳದೆ ಓಡಿ ಬಂದವನು. ಸುದ್ದಿಬಿಂಬ ಪತ್ರಿಕೆಯಲ್ಲಿ ಸುರುಗಿಕೊಂಡು. ವರದಿಗಾರಿಕೆ, ಪೇಜಿನೇಷನ್ ಹೀಗೆ ನನ್ನನ್ನು ನಾನು ತೊಡಗಿಸಿಕೊಂಡಿದ್ದೇನೆ. ನಾನು ಹೇಳಿಕೊಂಡಿದ್ದು ಸ್ವಲ್ಪ ಅತಿಯಾದರೆ ಕ್ಷಮಿಸಿ. ತಮ್ಮ ಪ್ರಕಾಶನದ 5ನೇ ಗೋಡೆಯ ಚಿತ್ರಗಳು ಕವನ ಸಂಕಲನದ ಹತ್ತಾರು ಪ್ರತಿಗಳನ್ನಾದರು ಸ್ನೇಹಿತರಿಗೆ ಹೇಳಿ ಕೊಂಡು ಓದಲು ಹೇಳುತ್ತೇನೆ. ವಿ.ಎಂ.ಮಂಜುನಾಥರ ಬ್ರಾಂಡಿ ನೀರಿನಂತೆ ಖಚರ್ಾಗಲಿ, ವಿ.ಆರ್.ಕಾಪರ್ೆಂಟರ್ರ 5ನೇ ಗೋಡೆಯ ಚಿತ್ರಗಳು ಬಣ್ಣ ಮೆತ್ತಿಕೊಂಡು ನಳ ನಳಿಸಲಿ, ಉಗಮ ಶ್ರೀನಿವಾಸರ ಒಂದು ಬಟ್ಟೆ ಚೂರು ತಾನ್ಗಟ್ಟಲೆ ಬಟ್ಟೆಯಾಗಲಿ ಎಂದು ಆಶಿಸುತ್ತೇನೆ. ಆತ್ಮೀಯ ಅಣ್ಣನವರಾದ ವಿ.ಎಂ.ಮಂಜುನಾಥರಿಗೆ ಕೇಳಿಕೊಳ್ಳುವುದೇನೆಂದರೆ ತಮ್ಮ ಈ-ಮೇಲ್ಗೊಂದು ಸಣ್ಣದೊಂದು ಪತ್ರ ಒಗೆದಿರುವೆ. ಈ ವಿಷಯ 5ಟ್ರೀ ಅಣ್ಣನಿಗೆ, ವಿ.ಆರ್.ಕಾಪರ್ೆಂಟರ್ ಕಿವಿಗೆ ಹಾಕಿ. ಕೇವಲ ನಮ್ಮ ಪತ್ರಿಕೆ ಸುದ್ದಿಬಿಂಬಕ್ಕೆ ವಿಶೇಷ ವರದಿ, ಜಿಲ್ಲಾ ಪತ್ರಿಕೆಗಳಿಗೆ ಲೇಖನ ಬರೆಯುತ್ತಿದ್ದ ನಾನು.ಈಗೀಗ ಕಥೆ, ಕವನದ ಜಾಡು ಹಿಡಿದಿದ್ದೇನ.

ಬುಧವಾರ, ಜನವರಿ 28, 2009

ಸಣ್ಣ ಕವನ

ವ್ಯತ್ಯಾಸ

ಮಹಲುಗಳ
ಎತ್ತರವ ನೊಡಿ
ಕಣ್ಣುಗಳು ನೊಯ್ದವು
ಗುಡಿಸಲುಗಳ
ಚಪ್ಪರವ ನೋಡಿ
ಕಣ್ಣುಗಳು ತೊಯ್ದವು

- ಬಸವರಾಜ ಹಳ್ಳಿ