ಮಂಗಳವಾರ, ಫೆಬ್ರವರಿ 3, 2009

ಬದುಕು ಹಸಿರಾಗಿಸಿದ ಕುಡುಗೋಲು


ಬದುಕು ಹಸಿರಾಗಿಸಿದ ಕುಡುಗೋಲು ನಾನು ನಿನ್ನನ್ನು ಪದೇ ಪದೇ ನೆನೆಪಿಸಿಕೊಳ್ಳುವಂತಾಗಿದೆ. ಸಿಟ್ಟಿನಲ್ಲಿ ನಾನು ಎಸೆದಿದ್ದ್ದು ಖರೆ. ಆದರೆ ನನಗೆ ನಿನ್ನ ತಾಕತ್ತು ,ಮಾಡಿದ ಉಪಕಾರ ಎಳ್ಳಷ್ಟು ಗೊತ್ತಿರಲಿಲ್ಲ. ಅದಕ್ಕೆ ನನ್ನ ಕೈ ಬೆರಳುಗಳಲ್ಲಿ ಈಗಿಗ ಹರಿದಾಡುತ್ತಿರುವ ನೋಟುಗಳು ಕಾರಣವೆನಿಸುತ್ತದೆ.ನಾನು ಮೊದಲಿನಂತಿಲ್ಲ ಹೌದು. ಮಾತಿಗೊಮ್ಮೆ ಯಾರ್ಯಾರ ಮುಂದೆ ಪ್ರತಿ ಬೆರಳಿಗಿಟ್ಟ ಉಂಗುರ, ಕೊರಳಿಗೆ ಹಾಕಿದ ಬಂಗಾರದ ಚೈನು ಎಲ್ಲ ಪ್ರದಶರ್ಿಸುತ್ತಿದ್ದೇನೆ. ರೂಪಾಯಿ ರೂಪಾಯಿಗೂ ಅಲೆದ ದಿನಗಳು ಮರೆತಂತಿದ್ದೇನೆ. ತಲೆಯಲ್ಲಿ ಅಹಂ ತೊಂಬತ್ತು ಡಿಗ್ರಿ ದಾಟಿದೆ ನಿನ್ನ ಜೊತೆಗಾತರ್ಿ ಅವ್ವ ಮೂಲೆ ಹಿಡಿದಿದ್ದಾಳೆ.ಆದರೂ ಅವ್ವನ ಕೈಗಳು ದಿನವೂ ನಿನ್ನ ಸ್ಪರ್ಶಕ್ಕೆ ಹಾತೊರೆಯುತ್ತವೆ. 'ಮಾಡುತ್ತಾಳಂತೆ ಕೆಲಸ ಬುದ್ದಿಗಿದ್ದಿ ಇದಿಯೇ ನಿಂಗೆ' ಎಂದು ನಾನು ಬೈದಾಗಲೊಮ್ಮೆ ಎರಡ್ಮೂರು ದಿನ ಮಾತುಬಿಟ್ಟು ಮತ್ತೆ ಬಯ್ಯುತ್ತೇನೆಂಬ ಭಯವಿದ್ದರೂ ಅದೇ ಮಾತಾಡುತ್ತಾಳೆ. ನಿನ್ನೊಂದಿಗಿದ್ದಷ್ಟು ಅವ್ವನ ಒಡನಾಟ ಮನೆಯ ಯಾರೊಂದಿಗಿಲ್ಲ.ನೀನು ಅವ್ವ ದುಡಿದು ಕುಟುಂಬಕ್ಕೆ ಕೂಳು ಹಾಕಿದಿರಿ. ನನ್ನ ಓದಿಗೆ ನಿನ್ನ ಸಹಾಯ ನೆನೆಸಿಕೊಂಡರೆ ಕಣ್ಣಾಲಿಗಳಲ್ಲಿ ನೀರಾಡುತ್ತವೆ. ಅವತ್ತು ಏನೋ ಕಾರಣಕ್ಕೆ ಬಂದ ಸಿಟ್ಟು ತಡೆದುಕೊಂಡಿದ್ದರೆ ನಿನ್ನನ್ನು ಬದುಕಿಸಬದಿತ್ತೇನೋ? ನನಗೀಗ ದೊಡ್ಡ ಪ್ರಮಾದವೆಸಗಿದ ಪಾಪಪ್ರಜ್ಞೆ ಕಾಡುತ್ತಿದೆ. ನಾನು ಎಸೆದ ರಭಸಕ್ಕೆ ಪುಡಿ ಪುಡಿಯಾದ ನಿನ್ನನ್ನು ಕಂಡು ಅವ್ವ ಮರುಗಿದ ಪರಿ ಹೇಳಲಸಾಧ್ಯ. ಬಹಳ ಜತನದಿಂದ ನಿನ್ನನ್ನು ತನ್ನ ಮಗನೆಂಬಂತೆ ನೋಡಿಕೊಂಡು ಬಂದಿದ್ದ ಅವ್ವ ಬಹಳ ಸಿಟ್ಟಿನಿಂದ ಅವತ್ತು 'ನೀನು ಇವತ್ತ ಸಕರ್ಾರಿ ನೌಕ್ರಿ ಮಾಡಿ 15 ಸಾವಿರ ಎಣಿಸ್ತಿ ಅಂದ್ರ ಆ ಕುಡಗೋಲ ಕಾರಣ. ನಿನ್ನ ಸಾಲಿ ಪೀಸು ಅದ್ರಲ್ಯ ದುಡಿದು ಕಟ್ಟೀನೇ ಲೋ' ಎಂದಾಗ ನನಗೆ ಮಾತೆ ಹೊರಡಲಿಲ್ಲ. ನನಗೀಗ ಜ್ಞಾನೋದಯವಾದಂತಾಗಿದೆ.ವಿದ್ಯ,ಬುದ್ದಿ ದಯಪಾಲಿಸಿ, ನನ್ನ ಜೀವನ ಹಸಿರಾಗಿಸಿದ ನಿನಗೆ ನನ್ನ ಪ್ರಣಾಮಗಳು. ನಾನು ಏನಾದರೂ ಗೀಚುವಾಗಲೊಮ್ಮೆ ನನ್ನ ಪೆನ್ನಿಗೆ ಶಕ್ತಿ ತುಂಬಿದ ನೀನು ಹೊಳೆಯುವ ಆಕಾರದಲ್ಲಿ ಮೂಡಿಬರುತಿ.್ತ ಕವನಗಳಲ್ಲಿ ಇಣುಕುತ್ತಿ. ನನ್ನಿಂದ ತಪ್ಪಾಗಿದೆ ಕ್ಷಮಿಸಿಬಿಡು ನಿನ್ನ ಆತ್ಮಕ್ಕೆ ಶಾಂತಿ ಕೋರಿ ದೇವರಲ್ಲಿ ಮೊರೆಯಿಡುತ್ತಿದ್ದೇನೆ.

ಬಸವರಾಜ ಹಳ್ಳಿ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ