ಗುರುವಾರ, ಜನವರಿ 29, 2009

ಒಂದು ಖಾಸಗಿ ಪತ್ರ



ಒಂದು ಖಾಸಗಿ ಪತ್ರ



ಪ್ರೀತಿಯ ಟ್ರೀ 5 ಪ್ರಕಾಶನದಅಣಾವ್ರಿಗೆ ನಮಸ್ಕಾರಗಳು


ತಮ್ಮ ಪ್ರಕಾಶನದಲ್ಲಿ ಹೊರತಂದಿರುವ ಥೇಟ್ ನನ್ನ ಗೆಳೆಯ ಕಾಪರ್ೆಂಟರ್ ಮಲ್ಲಿಯಂತಿರುವ ವಿ.ಆರ್.ಕಾಪರ್ೆಂಟರ್ರ ಕವನ ಸಂಕಲನ 5ನೇ ಗೋಡೆಯ ಚಿತ್ರಗಳು ನನ್ನ ಬಹುವಾಗಿ ಆಕಷರ್ಿಸಿತು. ಕಥೆ, ಕವನ, ಹನಿಗವನ ಹೀಗೆ ಸಾಹಿತ್ಯದ ಹರದಾರಿಯಲ್ಲಿ ಅಂಬೆಗಾಲಿಡುತ್ತಿರುವ ನಾನು ಈ ಕವನ ಸಂಕಲನವನ್ನು ನನ್ನ ಗುರುಗಳಾದ ಕಥೆಗಾರ ಕಲಿಗಣನಾಥ ಗುಡದೂರ ಅವರಿಂದ ಪಡೆದಿದ್ದೆ. ಅವರಿಂದ ಪಡೆದ ತಾಸೊಪ್ಪತ್ತಿನೊಳಗೆ ಕವನ ಸಂಕಲನದ ಒಪ್ಪ , ಓರಣವನ್ನು ಇಂಚಿಚು ಗಮನಿಸಿದೆ. ಏನೋ ಹೊಸತನ ಕಂಡಿತು. ಇದರಲ್ಲಿ ವಿ.ಎಂ.ಮಂಜುನಾಥರ ಕೈಚಳಕ ಢಾಳಾಗಿ ಕಂಡುಬಂತು. ಒಂದು ಉತ್ತಮ ಕವನ ಸಂಕಲನಕ್ಕೆ ಕಲೆಯ ಕೈ, ಖಚರ್ು ಮಾಡುವ ಕೈ, ಬರೆಯುವ ಕೈ ತ್ರಾಸುಪಟ್ಟಿರುವುದು ಓದಿ, ನೋಡಿ ಕಂಡುಕೊಂಡೆ. ಕವನ ಸಂಕಲನ ಸಿಕ್ಕ ದಿನದ ಮಧ್ಯಾಹ್ನವೇ ಪ್ರಕಾಶನದ ಹೊಣೆ ಹೊತ್ತಿರುವ ತಮಗೆ ಒಂದು ಪೋನು ಹೊಡೆದೆ. ಅಂದು ಉಡುಪು ತಯಾರಿಕೆ ಕಾಖರ್ಾನೆಯಲ್ಲಿ ಕೆಲಸದಲ್ಲಿದ್ದ ತಮಗೆ ಸ್ವಲ್ಪ ತೊಂದರೆ ಕೊಟ್ಟೆ ಅನಿಸುತ್ತೆ. ಒಂದೆ ಸಮನೆ ನನಗನಿಸಿದ್ದನ್ನು ನನ್ನ 8 ನಿಮಿಷ 10 ಸೆಕೆಂಡುಗಳ ಸಂಭಾಷಣೆಯಲ್ಲಿ ತಮಗೆ ತಿಳಿಸಿದೆ. ತಾವು ಈ ಸಮಯದಲ್ಲಿ ಭಾವುಕರಾಗಿದ್ದಂತೆ ಕಂಡುಬರುತ್ತದೆ. ತಾವು ನಡೆದು ಬಂದ..ನಡೆಯುತ್ತಲಿರುವ...ಮುಳ್ಳುಕಂಟಿಯ ದಾರಿಯ ಬಗ್ಗೆ ನನಗೆ ಹೇಳಿದ ಮೇಲೆ ಅರ್ಥವಾದದ್ದು. ನಾನು ಮೊದ ಮೊದಲು ತಮ್ಮ ಪ್ರಕಾಶನದಿಂದ ಇದೇ ಮೊದಲ ಕವನ ಸಂಕಲನವೇನು ಎಂದು ತಿಳಿದಿದ್ದೆ. ವಿ.ಎಂ.ಮಂಜುನಾಥರ ಬ್ರಾಂಡಿ ಕಥಾಸಂಕಲನ, ಉಗಮ ಶ್ರೀನಿವಾಸರ ಒಂದು ಬಟ್ಟೆ ಚೂರು ಕವನ ಸಂಕಲನ ಜೊತೆಗೆ ಇನ್ನೊಂದು ಸಂಕಲನ ತಂದಿರುವುದಾಗಿ (ಹೆಸರು ನೆನಪಿಲ್ಲ) ಹೇಳಿದಾಗ ಆಶ್ಚರ್ಯ ಚಕಿತನಾದೆ. ಉಡುಪು ಕಾಖರ್ಾನೆಯಲ್ಲೇ ದುಡಿದು ಕುಟುಂಬ ನಿರ್ವಹಣೆ ಜೊತೆಗೆ ಅದರಲ್ಲೇ ಹಣ ಉಳಿಕೆ ಮಾಡುತ ಈ ರೀತಿ ಸಾಹಿತ್ಯದ ಸೇವೆ ಮಾಡುತ್ತಿರುವ ನಿಮ್ಮಂತವರು ನಮಗೆ ಸ್ಪೂತರ್ಿಯ ಸೆಲೆ. ನಾನು ಓದಿದ್ದು ಬಿ.ಎ.ಕಾಲೇಜು ಬಿಟ್ಟು ಮೂರು ವರ್ಷವಾಯ್ತು. ನನ್ನ ವಯಸ್ಸಿನ ಗೆಳೆಯರು ಸಂಬಳ, ಗಿಂಬಳ ಅಂತ ಏನೇನೂ ಎಣಿಸುತ್ತಿದ್ದಾರೆ. ಓದುವಾಗ ಮನೆಯವರ ಹಸಿವು ಕಾಡಿಸಿತು. ಮತ್ತೆ ಓದುಬೇಕು ಎನ್ನುವಾಗ ಮೀಸೆ, ಆಸೆ ಎಲ್ಲ ಚಿಗುರಿದೆ ದುಡಿದು ದುಡಿದು ಹಣ್ಣಾಗಿರುವ ಅವ್ವನ ಮುಖ, ಹೊಲದಲ್ಲಿ ಗಳೇವು ಹೊಡೆದು ಹೊಡೆದು ಸಾಕಾಗಿರವ ಅಪ್ಪ ಇನ್ನು ಓದುತ್ತಿರುವ ತಮ್ಮ, ತಂಗಿ ಕಣ್ಣು ಕಾಣದ ದೊಡ್ಡವ್ವ ಎಲ್ಲರನ್ನೂ ದಿಟ್ಟಿಸಿ ನೋಡಿದರೆ ಯಂತ್ರದಂತೆ ದುಡಿದು ರೊಕ್ಕ ಎಣಿಸುತ್ತ ಇರಬೇಕೆನಿಸುತ್ತದೆ. ಒಬ್ಬ ಅಣ್ಣನಂತೆ, ಅಷ್ಟಕ್ಕೂ ನನ್ನ ಕಷ್ಟಕ್ಕೂ ಪಾಲುದಾರರಂತೆ ಸದಾ ಕೈ ಹಿಡಿದು ನಡೆಸುತ್ತಿರುವ, ಬೆಳಕಿನ ಪ್ರತಿರೂಪದಂತಿರುವ ಗುರು ಕಲಿಗಣನಾಥ ಗುಡದೂರರು ತಮ್ಮ ಸುದ್ದಿಬಿಂಬ ಪತ್ರಿಕೆಯಲ್ಲಿ ವರದಿಗಾರಿಕೆಯನ್ನು ನೀಡಿ , ತೀಡಿ ನನಗೊಂದಿಷ್ಟು ಬದುಕಲು ದಾರಿ ಮಾಡಿಕೊಟ್ಟಿದ್ದಾರೆ. ಬರುವ 2500ರೊಳಗೆ ಮನೆಗೊಂದಿಷ್ಟು ತಮ್ಮನ, ತಂಗಿಯ ಓದಿಗೊಂದಿಷ್ಟು ಖಚರ್ು ಮಾಡುತ್ತಾ ಪತ್ರಿಕೆಯ ತಾಲ್ಲೂಕ ಮಟ್ಟದ ಪತ್ರಿಕೆಯ ವರದಿಗಾರಿಕೆಯಲ್ಲಿ ಕಾಲ ನೂಕುತ್ತಿರುವೆ. ಇದಕ್ಕೂ ಮುಂಚೆ ರಾಯಚೂರಿನ ಜಿಲ್ಲಾ ಮಟ್ಟದ ಪತ್ರಿಕೆ ಸುದ್ದಿಮೂಲಪತ್ರಿಕೆಯಲ್ಲಿ ಗುರುಗಳ ಅಣತಿಯಂತೆ ಕೆಲಸ ಮಾಡಿದೆ. ಆದರೆ ಅಲ್ಲಿ ಕೇವಲ 2000ಕ್ಕೆ ದಿನದ 18ಗಂಟೆ ಒಂದು ವರ್ಷವಿಡೀ ದುಡಿದೆ. ಕೊನೆಗೆ ಸಾಕಾಗಿ ಹೇಳದೆ ಕೇಳದೆ ಊರಿನ ಹಿಡಿದೆ. ಹೊಲದಲ್ಲಿ ಕಬ್ಬಕ್ಕಿ ಓಡಿಸಿ ಓಡಿಸಿ ಸಾಕಾಗಿ ಅಪ್ಪ ಬೈಯ್ದನೆಂದು ಮುನಿಸಿಕೊಂಡು ದುಡಿದೇ ತೀರುತ್ತೇನೆಂದು ಬ್ಯಾಗಿಡಿದು 2007ರಲ್ಲಿ ಬೆಂಗಳೂರಿನ ಹೊಸೂರು ರಸ್ತೆಯಲ್ಲಿರುವ ಗಾಮರ್ೆಂಟ್ ಪ್ಯಾಕ್ಟರಿ ಶಾಹಿ ಎಕ್ಸ್ಪೋಟರ್್ ಲಿಮಿಟೆಡ್ ಬ್ರಾಂಚ್ ನಂ.1ರಲ್ಲಿ ಸ್ನೇಹಿತನ ರೊಂ ನಲ್ಲಿದ್ದು 3 ತಿಂಗಳು ಕಂಪ್ಯೂಟರ್ ವಿಭಾಗದಲ್ಲಿ ದುಡಿದೆ. ಪ್ಯಾಕ್ಟರಿಯೊಳಗಿನ ಜಗಳ, ದಬಾಯಿಸುವಿಕೆಗೆ ಒಮ್ಮೊಮ್ಮೆ ಮೂಕಪ್ರೇಕ್ಷಕನಾಗುತ್ತಿದ್ದ. ನಮ್ಮಂತವರಿಗೆ ಇದು ಊರು ಅಲ್ಲ. ಇಲ್ಲಿನ ಕೆಲಸವೂ ಚಲೋ ಅಲ್ಲ ಎಂದ ಪೇಮೆಂಟು, ಓಟಿ ಪೇಮೆಂಟು ಜೊತೆಗೆ ಗೆಳೆಯನಿಗೂ ಹೇಳದೆ ಕೇಳದೆ ಓಡಿ ಬಂದವನು. ಸುದ್ದಿಬಿಂಬ ಪತ್ರಿಕೆಯಲ್ಲಿ ಸುರುಗಿಕೊಂಡು. ವರದಿಗಾರಿಕೆ, ಪೇಜಿನೇಷನ್ ಹೀಗೆ ನನ್ನನ್ನು ನಾನು ತೊಡಗಿಸಿಕೊಂಡಿದ್ದೇನೆ. ನಾನು ಹೇಳಿಕೊಂಡಿದ್ದು ಸ್ವಲ್ಪ ಅತಿಯಾದರೆ ಕ್ಷಮಿಸಿ. ತಮ್ಮ ಪ್ರಕಾಶನದ 5ನೇ ಗೋಡೆಯ ಚಿತ್ರಗಳು ಕವನ ಸಂಕಲನದ ಹತ್ತಾರು ಪ್ರತಿಗಳನ್ನಾದರು ಸ್ನೇಹಿತರಿಗೆ ಹೇಳಿ ಕೊಂಡು ಓದಲು ಹೇಳುತ್ತೇನೆ. ವಿ.ಎಂ.ಮಂಜುನಾಥರ ಬ್ರಾಂಡಿ ನೀರಿನಂತೆ ಖಚರ್ಾಗಲಿ, ವಿ.ಆರ್.ಕಾಪರ್ೆಂಟರ್ರ 5ನೇ ಗೋಡೆಯ ಚಿತ್ರಗಳು ಬಣ್ಣ ಮೆತ್ತಿಕೊಂಡು ನಳ ನಳಿಸಲಿ, ಉಗಮ ಶ್ರೀನಿವಾಸರ ಒಂದು ಬಟ್ಟೆ ಚೂರು ತಾನ್ಗಟ್ಟಲೆ ಬಟ್ಟೆಯಾಗಲಿ ಎಂದು ಆಶಿಸುತ್ತೇನೆ. ಆತ್ಮೀಯ ಅಣ್ಣನವರಾದ ವಿ.ಎಂ.ಮಂಜುನಾಥರಿಗೆ ಕೇಳಿಕೊಳ್ಳುವುದೇನೆಂದರೆ ತಮ್ಮ ಈ-ಮೇಲ್ಗೊಂದು ಸಣ್ಣದೊಂದು ಪತ್ರ ಒಗೆದಿರುವೆ. ಈ ವಿಷಯ 5ಟ್ರೀ ಅಣ್ಣನಿಗೆ, ವಿ.ಆರ್.ಕಾಪರ್ೆಂಟರ್ ಕಿವಿಗೆ ಹಾಕಿ. ಕೇವಲ ನಮ್ಮ ಪತ್ರಿಕೆ ಸುದ್ದಿಬಿಂಬಕ್ಕೆ ವಿಶೇಷ ವರದಿ, ಜಿಲ್ಲಾ ಪತ್ರಿಕೆಗಳಿಗೆ ಲೇಖನ ಬರೆಯುತ್ತಿದ್ದ ನಾನು.ಈಗೀಗ ಕಥೆ, ಕವನದ ಜಾಡು ಹಿಡಿದಿದ್ದೇನ.

ಬುಧವಾರ, ಜನವರಿ 28, 2009

ಸಣ್ಣ ಕವನ

ವ್ಯತ್ಯಾಸ

ಮಹಲುಗಳ
ಎತ್ತರವ ನೊಡಿ
ಕಣ್ಣುಗಳು ನೊಯ್ದವು
ಗುಡಿಸಲುಗಳ
ಚಪ್ಪರವ ನೋಡಿ
ಕಣ್ಣುಗಳು ತೊಯ್ದವು

- ಬಸವರಾಜ ಹಳ್ಳಿ