ಭಾನುವಾರ, ಜೂನ್ 6, 2010

ಗ ಜ ಲ್



ಮನದ ಮೂಲೆಯೊಳಗೆ ಬಚ್ಚಿಟ್ಟೆ ನೂರು ಕನಸುಗಳ
ಸನಿಹವಿದ್ದು ಒಮ್ಮೆಯೂ ನೀ ಒಳಹೊಕ್ಕು ನೋಡಲಿಲ್ಲ.


ಪ್ರೀತಿ ರಕುತದಿ ಬರೆದೆ ಸಾವಿರ ಸಾವಿರ ಓಲೆಗಳ
ಕೈಗೆಟುಕಿದರೂ ಒಮ್ಮೆಯೂ ತಿರುವಿ ನೋಡಲಿಲ್ಲ.


ನಿನ ಅರಸಿ ಮರಭೂಮಿಯಲಿ ಬರಿಗಾಲಲಿ ಓಡಿದೆ
ಅಂಗಾಲಲಿ ಎದ್ದ ಗುಳ್ಳೆಗಳ ನೀ ಕಣ್ಣೆತ್ತಿ ನೋಡಲಿಲ್ಲ.


ಗೋಲಗುಂಬಜಿನಲಿ ನಿನ ಹೆಸರ ಸಾರಿ ಸಾರಿ ಕೂಗಿದೆ
ಏಳೇಳು ಬಾರಿ ಪ್ರತಿಧ್ವನಿಸಿದರೂ ನೀ ಕೇಳಲೇ ಇಲ್ಲ

ನಗುನಗುತಲಿ ಏನೂ ಹೇಳದೆ ಕೇಳದೆ ಹೋದೆಯಲ್ಲ
ನಿನ ಧ್ಯಾನದಲೇ ಕುಣಿಯೊಳಗಿದ್ದ ನನ್ನ ನೀ ನೋಡಲಿಲ್ಲ.

- ಬಸವರಾಜ ಹಳ್ಳಿ, ಹಸಮಕಲ್

ಶುಕ್ರವಾರ, ಏಪ್ರಿಲ್ 9, 2010

ಲಂಕೇಶ ಎಂಬ ಮಹಾಮಳೆ


ತಮ್ಮ ಸಮಕಾಲೀನ ಕಾಲ ಘಟ್ಟವನ್ನು ಬಹುವಾಗಿ ಪ್ರಭಾವಿಸಿದ ಪಾಳ್ಯದ ಲಂಕೇಶ ಮಹಾಮಳೆಯೇ ಸರಿ. ಗುಡುಗು, ಸಿಡಿಲಿನಿಂದ ಆರ್ಭಟಿಸಿ ಎಡೆಬಿಡದೆ ಧಾರಾಕಾರವಾಗಿ ಸುರಿದು ಊರ ಕೊಳಕು, ಕೊಚ್ಚೆ ಎಲ್ಲವನ್ನು ತೊಳೆದು, ಸಾಹಿತ್ಯದ ಹುಲುಸು ಬೆಳೆ ಬೆಳೆದವರು.ನೇರ, ನಿಷ್ಠುರತೆಯ ಪ್ರತಿರೂಪ. ಮಹಾಮಳೆಯಲ್ಲಿ ಅನೇಕರು ಮಿಂದೆದ್ದು ಹಿತಾನುಭವ ಅನುಭವಿಸಿದ್ದಾರೆ. ರಭಸಕ್ಕೆ ಕೆಲವರು ಮಳೆಯಲ್ಲೇ ಬೆವತಿದ್ದಾರೆ. ಲಂಕೇಶ ಮೇಷ್ಟ್ರು ಹೋಗಿ ಇಂದಿಗೆ ಹತ್ತು ವರ್ಷ ಒಂದು ತಿಂಗಳು ಎರಡು ದಿನ ಸಂದಿವೆ. ಆದರೂ ಇನ್ನೂ ಇದ್ದಾರೆನ್ನುವ ಮನೋಸ್ಥಿತಿ ಎಲ್ಲರಲ್ಲಿದೆ. ಅವರ ಅಭಿಮಾನಿ ಬಳಗ ಹಾಗೂ ಪ್ರಗತಿಪರ ಚಿಂತಕರು ಅವರ ಚಿಂತನೆಗಳನ್ನು ಮತ್ತೆ ಮತ್ತೆ ಮೆಲುಕು ಹಾಕುತ್ತಿರುವುದೇ ಅದಕ್ಕೆ ಸಾಕ್ಷಿ. ಪತ್ರಿಕೋದ್ಯಮ ಹಾಗೂ ಸಾಹಿತ್ಯದ ದಂತಕತೆ ಲಂಕೇಶ ಅವರ ವಿಚಾರಧಾರೆಗಳು ನಾಡಿನ ಬಹುತೇಕರನ್ನು ಪ್ರಭಾವಿಸಿದ್ದರಲ್ಲಿ ಎರಡು ಮಾತಿಲ್ಲ. ಅವರ ಮಾತಿಗೆ ಮತ್ತು ಲೇಖನಿಗ ಒಂದು ತೂಕವಿತ್ತು.ಎಂತವರನ್ನು ಎದುರು ಹಾಕಿಕೊಳ್ಳುವ ಅದಮ್ಯ ಧೈರ್ಯ.ಅದನ್ನು ಎಂದೂ ದುರುಪಯೋಗಪಡಿಸಿಕೊಂಡವರಲ್ಲ. ಅಸಹಾಯಕರ ಪರ ಮಿಡಿಯುವ ಹೃದಯವಿತ್ತು. ಲಂಕೇಶರು ಅನೇಕರನ್ನು ತೀರಾ ತೀರಾ ಹತ್ತಿರಕ್ಕೆ ಬಿಟ್ಟುಕೊಂಡಿದ್ದಾರೆ. ಎಡಬಿಡಂಗಿತನ ತೋರಿಸಿದಾಗ ಬಹುದೂರಕ್ಕೆ ಅಟ್ಟಿದ್ದಾರೆ. ಯಾರ ಮುಲಾಜು, ಓಲೈಕೆಗೆ ಮಣಿದವರಲ್ಲ. ಅವರಿಂದ ದೂರ ಸರಿದವರೆಲ್ಲಾ ಇಂದಿಗೂ ಲಂಕೇಶ ರನ್ನು ಗುರುಸ್ಥಾನದಲ್ಲಿಟ್ಟಿರುವುದೆ ಅವರ ವ್ಯಕ್ತಿತ್ವಕ್ಕೆ ಹಿಡಿದ ಕನ್ನಡಿ. 1980ರ ದಶಕದಲ್ಲಿ ಆರಂಭವಾದ ಲಂಕೇಶ ಪತ್ರಿಕೆ ಮೂಲಕ ಅವರು ಮಾಡಿದ ಸಾಮಾಜಿಕ ಕ್ರಾಂತಿ ಸಣ್ಣದಲ್ಲ.ಸಾಮಾನ್ಯ ಜನರ ನೋವು ವ್ಯಕ್ತಪಡಿಸಲು ಪತ್ರಿಕೆ ವೇದಿಕೆಯಾಯಿತು.ಸಕರ್ಾರವನ್ನು ನಡೆಸುವವರ ಬಗ್ಗೆ ಜನರಲ್ಲಿದ್ದ ಅಂಧ ಮನೋಭಾವನೆಯನ್ನು ಮೂಲೋತ್ಪಾಟನೆ ಮಾಡಿ, ಪ್ರಶ್ನಿಸುವ ಎಚ್ಚರ ಪ್ರಜ್ಞೆಯನ್ನು ಬೆಳೆಸಿದವರಲ್ಲಿ ಲಂಕೇಶರು ಮೊದಲಿಗರು. ರಾಜಕಾರಣಿಗಳ ಹುಳುಕುಗಳನ್ನು ಬಟಾಬಯಲುಗೊಳಿಸಿ ಜನರ ಧ್ವನಿಯಾಗಿ ನಿಲ್ಲುತ್ತಿದ್ದ ಅವರು ಒಂದೊಮ್ಮೆ ಸಕರ್ಾರವನ್ನು ಎದುರು ಹಾಕಿಕೊಂಡಿರುವ ಪ್ರಸಂಗಗಳು ನಡೆದಿವೆ.ಯಾರ ಬೆದರಿಕೆ, ಅಂಜಿಕೆಗೆ ಹೆದರದೆ ಆನೆ ನಡೆದದ್ದೆ ದಾರಿ ಎನ್ನುವಂತೆ ಮುನ್ನುಗ್ಗಿದವರು. ಪ್ರತಿವಾರವೂ ಲಂಕೇಶ ಪತ್ರಿಕೆಯನ್ನು ಒಪ್ಪಹೋರಣದಿಂದ ರೂಪಿಸುತ್ತಿದ್ದರು. ರಾಜಕೀಯಕ್ಕೆ ಸ್ವಲ್ಪ ಹೆಚ್ಚು ಪ್ರಾಧಾನ್ಯತೆ ಕೊಡುತ್ತಿದ್ದರೂ ಎನ್ನುವುದನ್ನು ಬಿಟ್ಟು ಅಂಕಣ ಬರಹಗಳು, ಯುವ ಬರಹಗಾರರ ಲೇಖನಗಳು, ಕವನ ಹಾಗೂ ಕತೆ ಹತ್ತ್ತು ಹಲವು ತೆರೆನಾಗಿ ರಂಗು ರಂಗಿನಿಂದ ಪತ್ರಿಕೆ ಹೊರಬರುತ್ತಿತ್ತು. ಪತ್ರಿಕೆ ಲಂಕೇಶರಿಗೆ ಮಗುವೇ ಆಗಿತ್ತು. ಪತ್ರಿಕೋದ್ಯಮದಲ್ಲಿ ಬೀಡು ಬೀಸಾಗಿ ನಡೆದಷ್ಟೆ ವೇಗವಾಗಿ ಸಾಹಿತ್ಯ ಕ್ಷೇತ್ರದಲ್ಲಿ ತಮ್ಮದೇ ಆದ ಚಾಪು ಮೂಡಿಸಿದರು. ಆಂಗ್ಲ ಉಪನ್ಯಾಸಕರಾಗಿದ್ದ ಲಂಕೇಶರು ಇಂಗ್ಲೀಷ್ ಬರಹಗಾರರನ್ನು ಅಪಾರವಾಗಿ ಓದಿಕೊಂಡಿದ್ದರು. ಆ ಹಿನ್ನೆಲೆಯಲ್ಲಿ ಬರೆದ ಅವರ ಅನೇಕ ಕಥೆಗಳು ಕನ್ನಡ ಸಾಹಿತ್ಯ ಲೋಕ ಹೊಸ ದಾರಿಯಲ್ಲಿ ಪಯಣಿಸುವಂತೆ ಮಾಡಿತು ಎನ್ನುವುದರಲ್ಲಿ ಸಂದೇಹವಿಲ್ಲ. ಅವರ ಮೊದಲ ಕಥಾ ಸಂಕಲನ ಕೆರೆಯ ನೀರನು ಕೆರೆಗೆ ಚೆಲ್ಲಿ 1963ರಲ್ಲಿ ಪ್ರಕಟವಾಯಿತು. 1964ರಲ್ಲಿ ಅವರ ನಾಟಕಗಳಾದ ಟಿ.ಪ್ರಸನ್ನನ ಗೃಹಸ್ಥಾಶ್ರಮ, ನನ್ನ ತಂಗಿಗೊಂದು ಗಂಡು ಕೊಡಿ ಹಾಗೂ ತೆರೆಗಳು ಪ್ರಕಟಗೊಂಡವು. ಹಾಗೂ ರಂಗದ ಮೇಲೂ ಅಭಿನಯಿಸಲ್ಪಟ್ಟವು. ಕಲ್ಲು ಕರಗುವ ಸಮಯ, ನಾನಲ್ಲ, ಉಮಾಪತಿಯ ಸ್ಕಾಲರ್ಷಿಪ್ ಯಾತ್ರೆ,ಉಲ್ಲಂಘಟನೆ ಮತ್ತು ಮಂಜು ಕವಿದ ಸಮಯ ಇವರ ಕಥಾ ಸಂಕಲನಗಳು. ಬಿರುಕು, ಮುಸ್ಸಂಜೆಯ ಕಥಾ ಪ್ರಸಂಗ ಮತ್ತು ಅಕ್ಕ ಕಾದಂಬರಿಗಳು. ಟೀಕೆ-ಟಿಪ್ಪಣೆ ಅಂಕಣ ಬರಹಗಳ ಸಂಗ್ರಹ. ಕಲ್ಲು ಕರಗುವ ಸಮಯ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆದ ಕಥಾ ಸಂಕಲನ. ಹೀಗೆ ಸಾಹಿತ್ಯ ಕ್ಷೇತ್ರದಲ್ಲಿ ತಮ್ಮನ್ನು ತೊಡಗಿಸಿಕೊಳ್ಳುವ ಮೂಲಕ ಅನೇಕ ಸಾಹಿತಿಗಳನ್ನು ಪ್ರಭಾವಿಸಿದರು. ಅವರ ಪ್ರಭಾವಕ್ಕೊಳಗಾದ ಸಾಹಿತಿಗಳು ಕೇಂದ್ರ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿಯನ್ನು ಪಡೆದಿದ್ದಾರೆ. ಬಹುಮುಖ ಪ್ರತಿಭೆ ಹೊಂದಿದ್ದ ಲಂಕೇಶರಿಗೆ ಕನ್ನಡ ಚಿತ್ರರಂಗಕ್ಕೆ ಸದಬಿರುಚಿಯ ಚಿತ್ರಗಳನ್ನು ಕೊಟ್ಟ ಕೀತರ್ಿ ಸಲ್ಲುತ್ತದೆ. ಅನುರೂಪ, ಖಂಡವಿದಕೊ ಮಾಂಸವಿದೆ ಕೊ, ಎಲ್ಲಿಂದಲೊ ಬಂದವರು, ಚಲನಚಿತ್ರಗಳನ್ನು ನಿದರ್ೇಶಿಸಿ ಸೈ ಎನಿಸಿಕೊಂಡರು. ಪಲ್ಲವಿ ಚಲನಚಿತ್ರಕ್ಕೆ ಕೇಂದ್ರ ಸಕರ್ಾರದ ಅತ್ಯುತ್ತಮ ನಿದರ್ೇಶಕ ಪ್ರಶಸ್ತಿಯೂ ಬಂತು. ಯು.ಆರ್. ಅನಂತಮೂತರ್ಿ ಅವರ ಕಾದಂಬರಿ ಆಧಾರಿತ ಸಂಸ್ಕಾರ ಚಿತ್ರದಲ್ಲಿ ನಾರಾಯಣಪ್ಪನ ಪಾತ್ರದಲ್ಲಿ ಅಭಿನಯಿಸಿ ಎಲ್ಲರ ಮೆಚ್ಚುಗೆಗಳಿಸಿದ್ದು ಈಗ ಇತಿಹಾಸ. ಎಲ್ಲಾ ರಂಗಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದ ಲಂಕೇಶ ಕ್ರೀಯಾಶೀಲತೆ ಎಂತಹದ್ದು ಎಂದು ಅವರ ಹುಳಿಮಾವಿನ ಮರ ಓದಿದಾಗ ತಿಳಿಯುತ್ತದೆ. ಏನಾದರೂ ಲಂಕೇಶರಿಗೆ ಲಂಕೇಶರೆ ಸಾಟಿ
- ಬಸವರಾಜ ಹಳ್ಳಿ, ಹಸಮಕಲ್