
ಭಾನುವಾರ, ನವೆಂಬರ್ 20, 2011
ಭಾನುವಾರ, ಅಕ್ಟೋಬರ್ 16, 2011
ಪ್ರಜಾವಾಣಿ ದೀಪಾವಳಿ ವಿಶೇಷಾಂಕ ಕವನ ಸ್ಪಧರ್ೆ -2011

'ಒಬ್ಬ ಅವ್ವ ಇರಲಿ, ಈ ಬಿಸಿಲ ಕೂಸುಗಳಿಗೆ' ಕವನ ಈ ಬಾರಿಯ ಪ್ರತಿಷ್ಠಿತ ಪ್ರಜಾವಾಣಿ ದೀಪಾವಳಿ ವಿಶೇಷಾಂಕ ಕವನ ಸ್ಪಧರ್ೆಯಲ್ಲಿ (2011) ಪ್ರಥಮ ಬಹುಮಾನ ಪಡೆದಿದೆ. ರಾಯಚೂರು ಜಿಲ್ಲೆಯ ಮಾನವಿ ತಾಲ್ಲೂಕಿನ ಸಿರವಾರದಲ್ಲಿ ಬಸವರಾಜ ಹೃತ್ಸಾಕ್ಷಿ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಇನ್ನೂ ಎರಡನೇ ಬಹುಮಾನ ಆರೀಫ್ ರಾಜಾ ಅವರ " ಬುಖರ್ಾ ಹೌಸಿನ ಮುಂದೆ' ಕವನಕ್ಕೆ ದೊರೆತಿದೆ. ಈ ಬಾರಿ ಪ್ರಥಮ ಮತ್ತು ದ್ವಿತೀಯ ಬಹುಮಾನ ರಾಯಚೂರು ಜಿಲ್ಲೆಗೆ ದಕ್ಕಿರುವುದು ವಿಶೇಷ. ಈ ಹಿಂದೆಯೇ ಆರೀಫ್ ರಾಜಾ ಅವರ ಕವನ "ಜಂಗಮ ಪಕೀರನ ಜೋಳಿಗೆ'ಗೆ ಪ್ರಥಮ ಸ್ಥಾನ ದೊರೆತಿದ್ದನ್ನು ನಾವು ಸ್ಮರಿಸಬಹುದು.
ಕಾವ್ಯ ಕ್ಷೇತ್ರದಲ್ಲಿ ಹೊಸ ಪ್ರಯೋಗದೊಂದಿಗೆ ಜಿಲ್ಲೆಯ ಕೀತರ್ಿಯನ್ನು ಹೆಚ್ಚಿಸಿರುವ ಬಸವರಾಜ ಹೃತ್ಸಾಕ್ಷಿ ಸಿರವಾರ ಹಾಗೂ ಆರೀಫ್ ರಾಜಾ ಅವರಿಗೆ
ಹೃದಯಪೂರ್ವಕ ಅಭಿನಂದನೆಗಳು.
- ಪಿ.ಲಂಕೇಶ್ ಬಳಗ, ಸಿಂಧನೂರು (9880757380)
ಮಂಗಳವಾರ, ಸೆಪ್ಟೆಂಬರ್ 20, 2011
ಬುಧವಾರ, ಜನವರಿ 12, 2011

ಅವ್ವನಮುರಿದ ಪೆಟಾರಿಯಲಿ ಮುಚ್ಚಿಟ್ಟ ಅಂಕಪಟ್ಟಿಗಳು
ನಿನ್ನ ಚೆಲುವಿಗೆ ಬೆಂಕಿ ಹಚ್ಚಿದ ಖೂಳರು ನನ್ನ ಮೂರು ಜನುಮದ ಯಜಮಾನರು
ಮಹಲುಗಳ ಓಟಕೆ ಜೋಪಡಿ ಪಟ್ಟಿಗಳು ನರಳಿವೆ
ದಾರಿ ಹೋಕರು ಬರುವ ಮುಂಚೆ
ಭಾನುವಾರ, ಜೂನ್ 6, 2010
ಗ ಜ ಲ್
ಮನದ ಮೂಲೆಯೊಳಗೆ ಬಚ್ಚಿಟ್ಟೆ ನೂರು ಕನಸುಗಳ
ಸನಿಹವಿದ್ದು ಒಮ್ಮೆಯೂ ನೀ ಒಳಹೊಕ್ಕು ನೋಡಲಿಲ್ಲ.
ಪ್ರೀತಿ ರಕುತದಿ ಬರೆದೆ ಸಾವಿರ ಸಾವಿರ ಓಲೆಗಳ
ಕೈಗೆಟುಕಿದರೂ ಒಮ್ಮೆಯೂ ತಿರುವಿ ನೋಡಲಿಲ್ಲ.
ನಿನ ಅರಸಿ ಮರಭೂಮಿಯಲಿ ಬರಿಗಾಲಲಿ ಓಡಿದೆ
ಅಂಗಾಲಲಿ ಎದ್ದ ಗುಳ್ಳೆಗಳ ನೀ ಕಣ್ಣೆತ್ತಿ ನೋಡಲಿಲ್ಲ.
ಗೋಲಗುಂಬಜಿನಲಿ ನಿನ ಹೆಸರ ಸಾರಿ ಸಾರಿ ಕೂಗಿದೆ
ಏಳೇಳು ಬಾರಿ ಪ್ರತಿಧ್ವನಿಸಿದರೂ ನೀ ಕೇಳಲೇ ಇಲ್ಲ
ನಗುನಗುತಲಿ ಏನೂ ಹೇಳದೆ ಕೇಳದೆ ಹೋದೆಯಲ್ಲ
ನಿನ ಧ್ಯಾನದಲೇ ಕುಣಿಯೊಳಗಿದ್ದ ನನ್ನ ನೀ ನೋಡಲಿಲ್ಲ.
- ಬಸವರಾಜ ಹಳ್ಳಿ, ಹಸಮಕಲ್
ಶುಕ್ರವಾರ, ಏಪ್ರಿಲ್ 9, 2010
ಲಂಕೇಶ ಎಂಬ ಮಹಾಮಳೆ

ಬುಧವಾರ, ಮಾರ್ಚ್ 11, 2009
ತಾಯಿಯಂತ ಅಣ್ಣ ನಾಗತಿಹಳ್ಳಿ ರಮೇಶಣ್ಣ (ಅವ್ವಣ್ಣಿ)
ಅಣ್ಣನ ಮುಖದಲ್ಲಿ ಸದಾ ನಗು.ಮಾತಿನಲ್ಲಿ ಅವ್ವನ ಕಕ್ಕುಲಾತಿ.ನೀಲಗಿರಿ ಮರದ ಪರ್ವತಗಳ ಕಡೆಯಿಂದ ಬಿಸಿಲೂರ ಕಡೆಯವರೆಗೂ ನಿಂತಲ್ಲಿ ನಿಲ್ಲದೆ, ಕುಂತಲ್ಲಿ ಕೂಡದೆ ಸದಾ ಜಲಪಾದಂತೆ ಹರಿದು ತಾಯಿಪ್ರೀತಿ ಹಂಚುತ್ತಾ ನೊಂದ ಜೀವಗಳಿಗೆ ಹಗಲನ್ನೆರಡು ತಾಸು ಮಿಡಿಯುವ ಜೀವವದು. ತನ್ನ ಸ್ವಸಾಮಥ್ರ್ಯದಿಂದ ನೋಡು ನೋಡುತ್ತಲೇ ಏಕಪ್ಯಾಂಟ್ನಿಂದ ಸಾವಿರು ಕೋಟುಗಳನ್ನು ಕೊಳ್ಳಬಲ್ಲಷ್ಟು ಎತ್ತರಕ್ಕೆ ಏರಿದ ಅಣ್ಣನಿಗೆ ಬದುಕಿನಲ್ಲಿ ಸಪ್ಪಗೆ ಸಾವಿರ ವರ್ಷ ಬದುಕಿದರೂ ಅರ್ಥವಿಲ್ಲ. ಏನಾದರೂ ಸಪ್ಪಳ ಮಾಡಿ ಸಾಧಿಸಿ ತೋರಿಸಬೇಕು. ಜೀವಂತ ದೇವರು ಅವ್ವನಿಗೆ ಹೆಸರು ತರಬೇಕೆನ್ನುವ ತುಡಿತ. ತಾಯಿ ಕಕ್ಕುಲಾತಿಯ ನಾಗತಿಹಳ್ಳಿ ರಮೇಶಣ್ಣನ ಕುರಿತು ನನ್ನ ಗುರುಗಳಾದ ಕಲಿಗಣನಾಥ ಗುಡದೂರು ಅವರಿಂದ ಕೇಳಲ್ಪಟ್ಟಿದ್ದೆ. ಆದಾದ ವಾರೊಪ್ಪತ್ತಿನಲ್ಲಿ. ಅಣ್ಣ ಸಿಂಧನೂರಿಗೆ ಬಂದೆಬಿಟ್ಟರು. ಅವರನ್ನು ಮೊದಲ ಬಾರಿಗೆ ಭೇಟಿಯಾದೆ. ಅಣ್ಣನ ಸ್ಪೂತರ್ಿದಾಯಕ ಮಾತುಗಳು,ಅಪರಿಚಿತರನ್ನು ಕ್ಷಣಮಾತ್ರದಲ್ಲಿ ವಷರ್ಾನುಗಟ್ಟಲೆ ಅವರೊಂದಿಗೆ ಇದ್ದವರೇನೋ ಎನ್ನುವಂತೆ ಆತ್ಮೀಯವಾಗಿ ಕಾಣುವಪರಿ ನನಗೆ ಆಶ್ಚರ್ಯ ಮೂಡಿಸಿತು. ಅಣ್ಣ ಅವ್ವನಿಗಾಗಿ ಬರೆದ ಸಮುದ್ರ ಮತ್ತು ಮಳೆಯನ್ನು ಹಿಡಿದು ಕುಳಿತರೆ ಸದಾ ಪಾದರಸದಂತೆ ಜಗದವ್ವನೊಡಲಲ್ಲಿ ಅಲೆಮಾರಿ ಅವ್ವಣ್ಣಿ (ರಮೇಶಣ್ಣ) ಹಾದು ಬಂದ ದಾರಿ ಹೋಗುತ್ತಿರುವ ಹಾದಿ ಎಲ್ಲವನ್ನು ಗಮನಿಸಿದಂತೆ ಎದೆಯಲ್ಲಿ ಸಮುದ್ರ ಮತ್ತು ಮಳೆಯ ಬೋರ್ಗರೆತ ಹೆಚ್ಚುತ್ತದೆ. ಕಪಾಳದ ತುಂಬೆಲ್ಲಾ ಕಣ್ಣೀರ ಜಿನುಗು ಮಳೆ. ಮರಣದ ನಂತರ ನಮ್ಮನ್ನು ನೆಲದೊಳಗಿನ ಗೋರಿಗಳೊಂದಿಗೆ ಕಾಣಬಾರದು, ಸಹಮಾನವರ ಎದೆಗಳಲ್ಲಿ ಕಾಣುವಂತಾಗಬೇಕು ಎನ್ನುವ ಜಲಾಲುದ್ದೀನ್ ರೂಮಿಯ ಉಕ್ತಿಯನ್ನು ಪ್ರಸ್ತಾಪಿಸಿರುವ ಅವ್ವಣ್ಣಿ ಅದರಂತೆ ಬದುಕುತ್ತಿದ್ದಾರೆ. ಅವ್ವಣ್ಣಿ (ರಮೇಶಣ್ಣ) ನೆಪ್ಪಿಗೆ ಬಂದಾಗಲೆಲ್ಲಾ ಅಣ್ಣಾವ್ರ ಕಸ್ತೂರಿ ನಿವಾಸ ಸಿನಿಮಾ ಮನಪಟಲದಲ್ಲಿ ಮೂಡುತ್ತದೆ. ಅಣ್ಣನನ್ನು ಭೇಟಿಯಾಗಿ ಇಂದಿಗೆ ಸುಮಾರು 20 ದಿನಗಳು ಕಳೆದವು. ಈಗ ಮತ್ತೆ ಮತ್ತೆ ಹೆತ್ತವ್ವ ನೆನೆಪಾಗುತ್ತಾಳೆ. ಆಗಾಗ ಕೆಲಸಕ್ಕೆ ಸಲಾಂ ಹೊಡೆದು ಊರ ಕಡೆ ಓಡಿ ಮತ್ತೆ ಹಿಂತಿರುಗುತ್ತೇನೆ. ಅಣ್ಣ ನನಗೆ ಒಂದು ಪಾಠವಾದ. ಅಣ್ಣ (ಅವ್ವಣ್ಣಿ) ನಂತವರಿಗೆ ಜಗದವ್ವನ ಆಶೀವರ್ಾದ ಇದ್ದೆ ಇರುತ್ತದೆ.
ಅಣ್ಣನ ಸಣ್ಣ ಕವಿತೆ
ರಾಗಿ, ಭತ್ತ
ಹುಟ್ಟುತ್ತ ಬೆಳೆಯುತ್ತ
ಆಗಸವನ್ನೇ ದಿಟ್ಟಿಸುತ್ತವೆ
ಫಲದ ಹೊನ್ನ ಕಿರೀಟ
*************************
- ಬಸವರಾಜ ಹಳ್ಳಿ

